Asianet Suvarna News Asianet Suvarna News
Lok sabha polls 2024 PM Modi speech in Viksit Bharat Sankalp Yatra convention at Uttara kannada Lok sabha constituency rav
Gallery Icon

ರಾಮಲಲ್ಲಾನಿಗೆ ಅಪಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ತಕ್ಕ ಪಾಠ: ನರೇಂದ್ರ ಮೋದಿ ವಿಶ್ವಾಸ

ಕಾಂಗ್ರೆಸ್ ಪಕ್ಷದವರು ರಾಮಲಲ್ಲಾನಿಗೆ ಅಪಮಾನ ಮಾಡಿದರು. ಇವರಿಗೆ ಕರ್ನಾಟಕ, ದೇಶ ಪಾಠ ಕಲಿಸದೆ ಇದ್ದೀತೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪ್ರಶ್ನಿಸಿದರು. ಶಿರಸಿಯಲ್ಲಿ ಇಂದು ‘ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ’ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದ ಅವರು, ಪ್ರಭು ಶ್ರೀರಾಮನ ಮಂದಿರವನ್ನು ಜನರೇ ತಮ್ಮ ಹಣದಿಂದ ನಿರ್ಮಿಸಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತು ಅವರ ಮಿತ್ರಪಕ್ಷಗಳು ರಾಮಮಂದಿರ ನಿರ್ಮಾಣ ತಡೆಯಲು ನಿರಂತರ ಪ್ರಯತ್ನ ಮಾಡಿದರು. ಆದರೆ, ದೇವಾಲಯದ ಟ್ರಸ್ಟಿಗಳು ಅವರ ತಪ್ಪು ಮರೆತು ಪ್ರಾಣ ಪ್ರತಿಷ್ಠೆಗೆ ಆಹ್ವಾನ ನೀಡಿದರು. ಇಷ್ಟಾದರೂ ಪ್ರಭುರಾಮನ ಪ್ರಾಣ ಪ್ರತಿಷ್ಠೆ ಆಹ್ವಾನವನ್ನು ಇವರು ತಿರಸ್ಕರಿಸಿ ಅವಮಾನ ಮಾಡಿದರು ಎಂದು ವಿವರ ನೀಡಿದರು. ಇದೇ ವೇಳೆ ಮುಸ್ಲಿಮರು ಈ ಆಹ್ವಾನವನ್ನು ಪುರಸ್ಕರಿಸಿದ್ದನ್ನು ಸ್ಮರಿಸಿದರು.