Asianet Suvarna News Asianet Suvarna News

Today Horoscope: ಇಂದು ಕೃಷ್ಣ ಜಯಂತಿ ಇದ್ದು, ಈ ರಾಶಿಯವರಿಗೆ ಖರ್ಚು ಹೆಚ್ಚಾಗಲಿದೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ನಿಜ ಶ್ರಾವಣ ಮಾಸ, ಕೃಷ್ಣ ಪಕ್ಷ, ಗುರುವಾರ, ಅಷ್ಟಮಿ ತಿಥಿ, ರೋಹಿಣಿ ನಕ್ಷತ್ರ. 

ಈ ದಿನ ಕೆಲವು ಕಡೆ ಕೃಷ್ಣ ಜಯಂತಿಯನ್ನು ಆಚರಿಸಲಾಗುತ್ತದೆ. ಅಷ್ಟಮಿ ಹಾಗೂ ರೋಹಿಣಿ ಎರಡೂ ಇರುವುದರಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಮಿಥುನ ರಾಶಿಯವರು ಈ ದಿನ ಶುಭಕಾರ್ಯಗಳಲ್ಲಿ ವ್ಯಯ ಮಾಡುತ್ತಾರೆ. ವೃತ್ತಿಯಲ್ಲಿ ಅನುಕೂಲವಿದ್ದು, ಈ ದಿನ ಹಿರಿಯರ ಸಲಹೆ ಪಡೆಯಿರಿ. ಇಂದು ನೀವು ಲಲಿತಾ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ:  ಇಂಡಿಯಾ ಎಂದಿದ್ದ ಕರಡು ಸಂವಿಧಾನದಲ್ಲಿ ಭಾರತ ಸೇರಿಸಿದ್ದ ಅಂಬೇಡ್ಕರ್!

Video Top Stories