Asianet Suvarna News Asianet Suvarna News

ಕೋಲಾರದ ಕೋಲಾಹಲದಲ್ಲಿ ಮುನಿದ ಮುನಿಯಪ್ಪ, ಕಾಂಗ್ರೆಸ್‌ಗೆ ತಲೆನೋವು!

ಕೆಹೆಚ್ ಮುನಿಯಪ್ಪ ಬಣ ಹಾಗೂ ರಮೇಶ್ ಕುಮಾರ್ ಬಣದಿಂದ ಟಿಕೆಟ್‌ಗಾಗಿ ಪಟ್ಟು, ಕೋಲಾರ ಕಾಂಗ್ರೆಸ್‌ನಲ್ಲಿ ಮುಂದುವರಿದ ಗೊಂದಲ, ಇಂದಿನಿಂದ 2ನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ, ಕೇಜ್ರಿವಾಲ್‌ಗೆ ತಪ್ಪದ ಸಂಕಷ್ಟ, ಇಡಿ ಕಸ್ಟಡಿ ಎಪ್ರಿಲ್ 1ರ ವರೆಗೆ ವಿಸ್ತರಣೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಕೋಲಾರದಲ್ಲಿ ಕಾಂಗ್ರೆಸ್‌ಗೆ ಟಿಕೆಟ್ ಗೊಂದಲ ಮಂದುವರಿದಿದೆ. ಕೆಹೆಚ್ ಮುನಿಯಪ್ಪ ಅಳಿಯನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಶಾಸಕರ, ಪರಿಷತ್ ಸದಸ್ಯರು ರಾಜೀನಾಮೆಗೂ ಮುಂದಾಗಿದ್ದರು. ಹೀಗಾಗಿ ಟಿಕೆಟ್ ಬದಲಾವಣೆ ಕುರಿತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದೆ. ಆದರೆ ಅಭ್ಯರ್ಥಿ ಯಾರು ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಇದೀಗ ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೆಯೋ ಅವರ ಪರ ಕೆಲಸ ಮಾಡುತ್ತೇವೆ ಅನ್ನೋ ಮಾತುಗಳು ಕಾಂಗ್ರೆಸ್ ನಾಯಕರಿಂದ ಬಂದಿದೆ. ಆದರೆ ಕೆಹೆಚ್ ಮುನಿಯಪ್ಪ ತಮ್ಮ ಪಟ್ಟು ಬಿಗಿಗೊಳಿಸಿದ್ದರೆ. ತಮ್ಮ ಅಳಿಯನಿಗೆ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಇದು ರಮೇಶ್ ಕುಮಾರ್ ಬಣದ ಆಕ್ರೋಶಕ್ಕೆ ಕಾರಣವಾಗಿದೆ.