Asianet Suvarna News Asianet Suvarna News

ಡುಮ್ಮ ಸರ್​ಗೆ ಶುರುವಾಯ್ತಪ್ಪಾ ಲವ್ವು... ಅಲರ್ಜಿಯಾಗ್ತಿರೋ ಮಲ್ಲಿಗೆನೂ ಇಷ್ಟವಾಗ್ತಿದೆಯಂತೆ!

ಮಲ್ಲಿಗೆ ಹೂವು ಎಂದರೆ ಅಲರ್ಜಿ ಪಡ್ತಿದ್ದ ಗೌತಮ್​, ಭೂಮಿಕಾಗೆ ಹೂವು ತಂದುಕೊಟ್ಟಿದ್ದಾನೆ. ಮುಂದೇನು? 
 

Gautham who was allergic to jasmine flower brought the flower to Bhumika suc
Author
First Published Mar 28, 2024, 2:21 PM IST

ಅಮೃತಧಾರೆ ಇದೀಗ ಕುತೂಹಲದ ಘಟ್ಟ ತಲುಪಿದೆ. ಇಲ್ಲಿಯವರೆಗೆ ಮಲ್ಲಿಗೆ ಹೂವು ಎಂದ್ರೆ ಅಲರ್ಜಿ ಅಂತಿದ್ದ ಗೌತಮ್​ ಪತ್ನಿ ಭೂಮಿಕಾಗೆ ಇಷ್ಟ ಎಂದು ಮಲ್ಲಿಗೆ ಹೂವನ್ನು ತಂದು ಕೊಟ್ಟಿದ್ದಾನೆ. ನಿಮಗೆ ಇದು ಎಂದ್ರೆ ಅಲರ್ಜಿ ಅಲ್ವಾ ಎಂದು ಭೂಮಿಕಾ ಕೇಳಿದಾಗ, ಈಗೀಗ ನಿಮಗೆ ಏನು ಇಷ್ಟವೋ, ಅದು ನನಗೂ ಇಷ್ಟ ಆಗ್ತಿದೆ, ಯಾಕೋ ಗೊತ್ತಿಲ್ಲ ಎಂದಿದ್ದಾನೆ. ಭೂಮಿಕಾ ನಾಚಿ ನೀರಾಗಿದ್ದಾಳೆ. ಮಲ್ಲಿಗೆ ಹೂವನ್ನು ಮುಡಿಸುವಂತೆ ಕೇಳಿದಾಗ, ಅಂಜುತ್ತಲೇ ಅದನ್ನು ಮುಡಿಸಿದ್ದಾನೆ ಗೌತಮ್​. ಒಟ್ಟಿನಲ್ಲಿ ಡುಮ್ಮ ಸರ್​ಗೆ ಕೊನೆಗೂ ಲವ್​ ಅಂದ್ರೇನು ಅಂತ ಗೊತ್ತಾಗೋಕೆ ಶುರುವಾಗಿದೆ ಅಂತಿದ್ದಾರೆ ಫ್ಯಾನ್ಸ್​. ಮಲ್ಲಿಗೆ ಹೂವಿನ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳ ಸುರಿಮಳೆಯಾಗುತ್ತಿದೆ. ನಿಮ್ಮಿಬ್ಬರ ಪ್ರೀತಿಗೆ ಯಾರ ಕಣ್ಣೂ ಬೀಳದಿರಲಿ ಅಂತಿದ್ದಾರೆ ಅಭಿಮಾನಿಗಳು. 

ಹಾಗೆಂದು ಗೌತಮ್​ಗೆ ಇದೇ ಮೊದಲು ಬಾರಿಯಲ್ಲ. ಹಿಂದೆಯೂ ತಾನು ಪ್ರೀತಿ ಮಾಡ್ತಿರೋದು ತಿಳಿದಿತ್ತು. ಆದರೂ ಪ್ರೀತಿ-ಗೀತಿ ಅನ್ನೋದೇ ಗೊತ್ತಿಲ್ಲದ ಗೌತಮ್​ಗೆ ಇವೆಲ್ಲಾ ಹೊಸತಾಗಿತಲ್ಲಾ!  ಅತ್ತ ಭೂಮಿಕಾ ಅಂತೂ ತನ್ನ ಪ್ರೀತಿಯನ್ನು ಪತಿಗೆ ಹೇಗೆ ತಿಳಿಸಬೇಕು ಎನ್ನುವುದನ್ನು ತಿಳಿಯದೇ ಕಸಿವಿಸಿಯಲ್ಲಿಯೇ ಇದ್ದಳು, ಈಗೂ ಆಕೆ ನೇರವಾಗಿ ಪ್ರೀತಿಯ ಬಗ್ಗೆ ಹೇಳಿಯೇ ಇಲ್ಲ.  ಅವಳು ಪ್ರೀತಿಯನ್ನು ತಿಳಿಸಲು ಎಷ್ಟೇ ಪ್ರಯತ್ನ ಮಾಡಿದರೂ ಅದು ಪೆದ್ದು ಗೌತಮ್​ಗೆ ಗೊತ್ತೇ ಆಗುತ್ತಿಲ್ಲ. ಸ್ನೇಹಿತ ಆನಂದ್​, ಗೌತಮ್​ಗೆ ಚಾಲೆಂಜ್​ ಕೊಟ್ಟಿದ್ದ. ಪತ್ನಿಗೆ ಕಿಸ್​ ಮಾಡ್ಲೇಬೇಕು ಎನ್ನುವ ಚಾಲೆಂಜ್​ ಇದಾಗಿತ್ತು. ಇಲ್ಲದಿದ್ದರೆ ಪಾರ್ಟಿಯಲ್ಲಿ ಕುಡಿದ ವಿಷಯವನ್ನು ಅಜ್ಜಿಗೆ ತಿಳಿಸುವುದಾಗಿ ಹೇಳಿದ್ದ. ಗೌತಮ್​ಗೆ ಬೇರೆ ದಾರಿಯೇ ಇರಲಿಲ್ಲ. ಪತ್ನಿಗೆ ಕಿಸ್​ ಕೊಡಲೇಬೇಕು ಎಂದು ಹೋಗಿದ್ದ. ಅಷ್ಟರಲ್ಲಿಯೇ ಭೂಮಿಕಾ ಸಮೀಪ ಹಲ್ಲಿ ಬಂದು ಇನ್ನೇನು ಇಬ್ಬರೂ ಒಂದಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.  

ಕೊನೆಗೂ ರಣಚಂಡಿ ಅವತಾರ ಎತ್ತಿದ ಭಾಗ್ಯ: ಕನ್ನಿಕಾ ಮಿಸ್​ಗೆ ಶಿಕ್ಷೆ ಆಗತ್ತಾ, ಅಥ್ವಾ..?

ಹಾಗೆಂದು ಗೆಳೆಯ ಆನಂದ್​ ಬಿಟ್ಟಾನೆಯೆ? ಅಷ್ಟಕ್ಕೂ ಅಮೃತಧಾರೆಯ ಆನಂದ್​ ಮತ್ತು ಗೌತಮ್​ ಫ್ರೆಂಡ್​ಷಿಪ್​ ಎಲ್ಲರಿಗೂ ತಿಳಿದದ್ದೇ. ಇದ್ದರೆ ಇರಬೇಕು ಇಂಥ ಸ್ನೇಹಿತರು ಎನ್ನುವಂಥ ಸ್ನೇಹ ಅಮೃತಧಾರೆ ಸೀರಿಯಲ್​ ಗೌತಮ್​ ಮತ್ತು ಆನಂದ್​ ಅವರದ್ದು. ಇದು ಧಾರಾವಾಹಿಯಾದರೂ ನಿಜ ಜೀವನದಲ್ಲಿ ಇಂಥ ಸ್ನೇಹಿತರು ಸಿಕ್ಕರೆ ಅವರೆಷ್ಟು ಪುಣ್ಯವಂತರು ಎನ್ನುತ್ತಿದ್ದಾರೆ ಪ್ರೇಕ್ಷಕರು. ಯಾರೇ ಕೈಬಿಟ್ಟರೂ ಕೊನೆಯವರೆಗೆ ಇರುವವರು, ನೋವಿನ ಕಾಲಕ್ಕೆ ಆಗುವವರು ಸ್ನೇಹಿತರೇ ಎನ್ನುವ ಮಾತಿದೆ. ಆದರೆ ಇದು ಬದಲಾಗುತ್ತಿರುವ ಕಾಲಘಟ್ಟದಲ್ಲಿ ಬಹುತೇಕ ಮಂದಿ ಬೆನ್ನಿಗೆ ಚೂರಿ ಹಾಕುವವರೇ ಇರುವ ಸಮಯದಲ್ಲಿ ಗೌತಮ್​ ಮತ್ತು ಆನಂದ್​ ಸ್ನೇಹ ಮಾತ್ರ ಸೀರಿಯಲ್​ ವೀಕ್ಷಕರಿಗೆ ಖುಷಿ ಕೊಡುವುದಂತೂ ಸುಳ್ಳಲ್ಲ. ರೊಮ್ಯಾನ್ಸ್​, ಪ್ರೀತಿ, ಪ್ರಣಯದ ಗಂಧ ಗಾಳಿಯೇ ಇಲ್ಲದ ಗೌತಮ್​ಗೆ ಇವೆಲ್ಲವನ್ನೂ ಹೇಳಿಕೊಡುವ ಆನಂದ್​ನ ಸ್ನೇಹದ ಪರಿಯೇ ಕುತೂಹಲವಾದದ್ದು. ತಮಾಷೆಯ ಧಾಟಿಯಲ್ಲಿ ಪತ್ನಿಯ ಮೇಲೆ ಮೋಹ ಹುಟ್ಟುವಂತೆ ಮಾಡುವಲ್ಲಿ ಆನಂದ್​ ಪಾಲು ಬಹುದೊಡ್ಡದಿದೆ.

 
ಈಗಲೂ ಗೆಳೆಯ ಆನಂದ್​ ಹೇಳಿಕೊಟ್ಟಂತೆಯೇ ಗೌತಮ್​  ಮಲ್ಲಿಗೆ ಹೂವು ತೆಗೆದುಕೊಂಡು ಹೋಗಿದ್ದಾನೆ. ಭೂಮಿಕಾ ಅಡುಗೆಗೆ ಏನು ಮಾಡಲಿ ಎಂದು ಫೋನ್​ ಮಾಡಿದ ಸಂದರ್ಭದಲ್ಲಿ ಗೌತಮ್​  ಮುಖದಲ್ಲಿ ಆದ ಬದಲಾವಣೆ ನೋಡಿ ಆನಂದ್​ಗೆ ವಿಷ್ಯ ತಿಳಿದುಬಿಟ್ಟಿದೆ. ಗೆಳೆಯನ ಕಾಲೆಳೆದ ಆತ, ಅತ್ತಿಗೆಗೆ ಹೂವು ತೆಗೆದುಕೊಂಡು ಹೋಗುವಂತೆ ಹೇಳಿದ್ದ. ಮಲ್ಲಿಗೆ ಹೂವು ಇಬ್ಬರನ್ನೂ ಒಂದು ಮಾಡಿದೆ. ಆದರೆ ಇದೇ ವೇಳೆ ಮಾನ್ಯ ಯಾರು ಎಂಬುದನ್ನು ಇದುವರೆಗೆ ಸಸ್ಪೆನ್ಸ್​ ಇಟ್ಟಿರುವ ಕಾರಣ, ಅಭಿಮಾನಿಗಳಿಗೆ ಅದರ ಟೆನ್ಷನ್​ ಕೂಡ ಶುರುವಾಗಿದೆ. 

 

ರಾಮ್​ಗೆ ಸೀತೆ ಹೇಳಿಯೇ ಬಿಟ್ಟಳು ಸಿಹಿ ಹುಟ್ಟಿನ ರಹಸ್ಯ? ಅಷ್ಟರಲ್ಲೇ ನಡೆಯಿತು ಅವಾಂತರ...
 

Follow Us:
Download App:
  • android
  • ios