Asianet Suvarna News Asianet Suvarna News

ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶ; ಕೂದಲೆಳೆ ಅಂತರದಲ್ಲಿ ನಟ ದರ್ಶನ್ ಪಾರು!

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ವೇಳೆ ನಟ ದರ್ಶನ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

Mandya Lok sabha election 2024 Actor Darshan election campaign vehicle touched with electric wire rav
Author
First Published Apr 19, 2024, 8:04 PM IST

ಮಂಡ್ಯ (ಏ.19): ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ವೇಳೆ ನಟ ದರ್ಶನ ಪ್ರಚಾರದ ವಾಹನಕ್ಕೆ ವಿದ್ಯುತ್ ತಂತಿ ಸ್ಪರ್ಶವಾಗಿ ಅನಾಹುತದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರ ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ನಟ ದರ್ಶನ. ಇಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗ್ರಹಾರ ಬಾಚನಹಳ್ಳಿ ಬಳಿ ಪ್ರಚಾರದಲ್ಲಿ ತೊಡಗಿದ್ದ ವೇಳೆ ನಡೆದಿರುವ ಘಟನೆ. ವಾಹನ ಚಾಲಕ ನಿರ್ಲಕ್ಷವಹಿಸಿ ವೇಗವಾಗಿ ಮುಂದೆ ಸಾಗಿದ್ದಾನೆ ಈ ವೇಳೆ ವಿದ್ಯುತ್ ತಂತಿ ವಾಹನಕ್ಕೆ ಸ್ಪರ್ಶಿಸಿದೆ ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾರೆ.

ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕಕ್ಕೆ ಒಳಗಾಗಿದ್ದ ನಟ ದರ್ಶನ್, ಬಳಿಕ ಚುನಾವಣಾ ಪ್ರಚಾರ ಮೊಟಕುಗೊಳಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. 

ಜನಸಾಗರದ ನಡುವೆ ಸ್ಟಾರ್‌ ಚಂದ್ರು ಪರ ನಟ ದರ್ಶನ್ ಅದ್ಧೂರಿ ಪ್ರಚಾರ 

ನಿನ್ನೆಯಿಂದಲೇ ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ನಟ ದರ್ಶನ್‌, ಹಲಗೂರು ಮಳವಳ್ಳಿ ತಾಲೂಕಿನಾದ್ಯಂತ ಭರ್ಜರಿ ಪ್ರಚಾರ ನಡೆಸಿದ್ದಾರೆ. ನಟ ದರ್ಶನ್ ಪ್ರಚಾರದ ವೇಳೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು. ಡಿ ಬಾಸ್ ಡಿ ಬಾಸ್ ಎಂಬ ಜೈಕಾರ ಘೋಷಣೆ ಕೂಗಿದ್ದರು. ತಮ್ಮ ನೆಚ್ಚಿನ ನಟನನ್ನ ಕಣ್ಣಾರೆ ಕಂಡು ಸಂತಸಗೊಂಡಿದ್ದರು. ಇಂದಿನ ಚುನಾವಣೆ ಪ್ರಚಾರದ ವೇಳೆ ಇಂತಹ ದುರ್ಘಟನೆ ನಡೆದಿದೆ.

Follow Us:
Download App:
  • android
  • ios