Asianet Suvarna News Asianet Suvarna News

ಧಾರ್ಮಿಕ ಭಾವನೆಗೆ ಧಕ್ಕೆ: ಕ್ಷಮೆ ಕೋರಿದ ‘12th ಫೇಲ್’ ನಟ ವಿಕ್ರಾಂತ್ ಮೆಸ್ಸೆ- ಅಷ್ಟಕ್ಕೂ ಆಗಿದ್ದೇನು?

ಧಾರ್ಮಿಕ ಭಾವನೆಗೆ ಧಕ್ಕೆ ಆರೋಪದ ಹಿನ್ನೆಲೆಯಲ್ಲಿ ಕ್ಷಮೆ ಕೋರಿದ್ದಾರೆ ‘12th ಫೇಲ್’ ನಟ ವಿಕ್ರಾಂತ್ ಮೆಸ್ಸೆ- ಅಷ್ಟಕ್ಕೂ ಆಗಿದ್ದೇನು? 
 

Vikrant Massey apologises for viral 2018 tweet featuring Ram Sita cartoon suc
Author
First Published Feb 21, 2024, 6:05 PM IST

ನಟ ವಿಕ್ರಾಂತ್ ಮೆಸ್ಸೆ ಹೆಸರು ಇದೀಗ ಬಹಳವಾಗಿ ಕೇಳಿ ಬರುತ್ತಿದೆ. ಅವರ ಸೂಪರ್ ಹಿಟ್, ಸ್ಫೂರ್ತಿದಾಯ ‘12th ಫೇಲ್’ ಚಿತ್ರ ಭರ್ಜರಿ ಹಿಟ್​ ಆಗುತ್ತಲೇ ವಿಕ್ರಾಂತ್​ ಅವರು ಮಿಂಚುತ್ತಿದ್ದಾರೆ. ಈಗ ಇವರ ಬಗ್ಗೆ ಇನ್ನಿಲ್ಲದ ಆಸಕ್ತಿ ಜನರಲ್ಲಿ ಮೂಡುತ್ತಿದೆ. ತಿಂಗಳಿಗೆ 35 ಲಕ್ಷ ರೂಪಾಯಿ ಬರುತ್ತಿದ್ದ ಧಾರಾವಾಹಿಯನ್ನು ಬಿಟ್ಟು ಬೆಳ್ಳಿಪರದೆಯನ್ನು ಆಯ್ದುಕೊಂಡಿದ್ದ ವಿಕ್ರಾಂತ್​ ಅವರಿಗೆ ಇದೀಗ ಯಶಸ್ಸಿನ ಸುರಿಮಳೆಯೇ  ಆಗುತ್ತಿದೆ. ವಿಧು ವಿನೋದ್ ಚೋಪ್ರಾ ಅವರ ನಿರ್ದೇಶನದ ‘12th ಫೇಲ್’ ಅನುರಾಗ್ ಪಾಢಕ್ ಅವರ ಪುಸ್ತಕವನ್ನು ಆಧರಿಸಿ ಮಾಡಲಾಗಿದೆ.  ಭಾರತೀಯ ಪೊಲೀಸ್​ ಸೇವೆಯ ಅಧಿಕಾರಿಯಾಗಿರುವ  ಮನೋಜ್ ಕುಮಾರ್ ಶರ್ಮಾ ಅವರ ನಿಜ ಜೀವನದ ಕಥೆ ಈ ಸಿನಿಮಾದಲ್ಲಿದೆ. ಈ ಚಿತ್ರಕ್ಕೆ ಒಳ್ಳೆಯ ರಿಸ್​ಪಾನ್ಸ್​ ಸಿಗುತ್ತಲೇ  ವಿಕ್ರಾಂತ್​ ಅವರು ಭಾರಿ ಯಶಸ್ಸಿನಲ್ಲಿದ್ದಾರೆ.

ಆದರೆ ಇದರ ಬೆನ್ನಲ್ಲೇ ವಿವಾದವೊಂದು ಇವರನ್ನು ಸುತ್ತುಕೊಂಡಿತ್ತು. ಒಬ್ಬರು ಯಶಸ್ಸು ಗಳಿಸಿದರು ಎಂದಾಕ್ಷಣ, ಅವರ ಹಿನ್ನೆಲೆಯೆಲ್ಲವೂ ಮತ್ತೆ ಬೆಳಕಿಗೆ ಬರುವುದು ಸಹಜ. ಇವರ ಬಗ್ಗೆ ಜನರಿಗೆ ಇನ್ನಿಲ್ಲದ ಆಸಕ್ತಿ ತಲೆದೋರುತ್ತದೆ. ಇದೇ ರೀತಿ ವಿಕ್ರಾಂತ್​ ಅವರಿಗೂ ಆಗಿದೆ. ‘12th ಫೇಲ್’ ಯಶಸ್ಸಿನ ಬಳಿಕ ಇವರ  ಹಳೆಯ ಟ್ವೀಟ್ ಒಂದು ವೈರಲ್ ಆಗಿದೆ.  ಇದನ್ನು ನೋಡಿದವರು ವಿಕ್ರಾಂತ್ ಅವರು ಹಿಂದೂ ವಿರೋಧಿ ಎಂದು ಸೋಷಿಯಲ್​ ಮೀಡಿಯಾದಲ್ಲಿ ಹೇಳುತ್ತಿದ್ದಾರೆ.  

ವಿರುಷ್ಕಾ ಪುತ್ರ ಹುಟ್ಟುತ್ತಲೇ ನೂರಾರು ಸೋಷಿಯಲ್​ ಮೀಡಿಯಾ ಅಕೌಂಟ್​! ನೆಟ್ಟಿಗರು ಸುಸ್ತೋ ಸುಸ್ತು...

ಅಷ್ಟಕ್ಕೂ ವಿಕ್ರಾಂತ್​ ಅವರು, 2018ರಲ್ಲಿ ಮಾಡಿರುವ ಟ್ವೀಟ್​ ಇದಾಗಿದೆ. ಇದರಲ್ಲಿ ವಿಕ್ರಾಂತ್ ಅವರು ಶ್ರೀರಾಮಚಂದ್ರನಿಗೆ ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.  ರಾಮನ ಭಕ್ತರಿಗೆ ಅಪಮಾನವಾಗುವಂಥ ಸಾಲುಗಳಿವೆ ಎನ್ನುವ ಕಾರಣಕ್ಕೆ ಇವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ,  ಹಿಂದೂ ಕಾರ್ಯಕರ್ತರು ಬಾಲಕಿಯೊಬ್ಬರನ್ನು ಅತ್ಯಾಚಾರ ಮಾಡಿದ ಸುದ್ದಿಗಾಗಿ ಒಂದು ಕಾರ್ಟೂನ್​ ರಚಿಸಲಾಗಿತ್ತು. ಈ  ಕಾರ್ಟೂನ್ ಅನ್ನು  ವಿಕ್ರಾಂತ್ ಅವರು ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದರು. ಅದರಲ್ಲಿ  ಸೀತಾದೇವಿಯು ರಾಮನೊಂದಿಗೆ, ‘ಪುಣ್ಯಕ್ಕೆ ನನ್ನನ್ನು ರಾವಣ ಅಪಹರಣ ಮಾಡಿದ, ನಿನ್ನ ಭಕ್ತರು ಅಪಹರಣ ಮಾಡಿದ್ದರೆ ಕಷ್ಟವಾಗುತ್ತಿತ್ತು’ ಎಂದು ಬರೆಯಲಾಗಿತ್ತು. ಈ ಕಾರ್ಟೂನನ್ನು ಸೋಷಿಯಲ್​  ಮೀಡಿಯಾದಲ್ಲಿ ಶೇರ್​ ಮಾಡಿಕೊಂಡಿದ್ದ  ವಿಕ್ರಾಂತ್  ಅವರು, ‘ಅರ್ಧ ಬೆಂದ ಆಲೂಗಡ್ಡೆ, ಅರ್ಧ ಬೆಂದ ರಾಷ್ಟ್ರೀಯವಾದಿಗಳು ದೇಹಕ್ಕೆ ನೋವನ್ನೇ ನೀಡುತ್ತವೆ’ ಎಂದು ಬರೆದುಕೊಂಡಿದ್ದರು. 

ಇದೀಗ ಈ ಟ್ವೀಟ್​ ವೈರಲ್​ ಆಗಿದ್ದು, ಇವರು ಹಿಂದೂ ವಿರೋಧಿ ಎನ್ನಲಾಗುತ್ತಿದೆ. ವೈರಲ್​ ಆಗುತ್ತಲೇ ವಿಕ್ರಾಂತ್​ ಅವರು, ಕ್ಷಮೆ ಕೋರಿದ್ದಾರೆ.  ‘2018ರ ನನ್ನ ಆ ಟ್ವೀಟ್​ ಬಗ್ಗೆ ನಾನು ಈಗ ಕೆಲವು ಮಾತನ್ನು ಹೇಳುತ್ತೇನೆ.  ನಾನು ಇದರಲ್ಲಿ ಹಿಂದೂ ಧರ್ಮಕ್ಕೆ ಅಪಮಾನ ಮಾಡುವ ಅಥವಾ ಕೇಡು ಬಯಸುವ ಉದ್ದೇಶವಿರಲಿಲ್ಲ.  ಆಗ ನನ್ನ ಸಹಜ ಬೇಸರವನ್ನು ವ್ಯಂಗ್ಯದ ಮೂಲಕ ಹೇಳಿದ್ದೆ ಅಷ್ಟೇ.   ನಾನು ಆ ಕಾರ್ಟೂನ್ ಅನ್ನು ನನ್ನ ಟ್ವೀಟ್​ ಜೊತೆಗೆ ಸೇರಿಸಿರುವುದು ದೊಡ್ಡ ಪ್ರಮಾದವಾಗಿದೆ.  ಯಾರಿಗಾದರೂ  ನನ್ನ ಟ್ವೀಟ್​ನಿಂದ ನೋವಾಗಿದ್ದರೆ ನಾನು ಮನಃಪೂರ್ವಕವಾಗಿ ಕ್ಷಮೆ ಕೋರುತ್ತೇನೆ.  ನಿಮಗೆಲ್ಲರಿಗೂ ತಿಳಿದೇ ಇರುವಂತೆ, ನಾನು ಎಲ್ಲಾ ನಂಬಿಕೆಗಳನ್ನ ಮತ್ತು ಧರ್ಮಗಳನ್ನು ಸಾಧ್ಯವಾದಷ್ಟು ಹೆಚ್ಚಿನ ಗೌರವಿಸುತ್ತೇನೆ. ನಾವೆಲ್ಲರೂ ಸಮಯದೊಂದಿಗೆ ಬೆಳೆಯುತ್ತೇವೆ ಮತ್ತು ನಮ್ಮ ತಪ್ಪುಗಳಿಂದ ಕಲಿಯುತ್ತೇವೆ ಎಂದಿದ್ದಾರೆ.

 ಬಿಗ್​ಬಾಸ್​ ವಿನಯ್​ ಕನಸು ಏನಿತ್ತು? ಡ್ರೋನ್​ ಪ್ರತಾಪ್​ ಗೆಲ್ಲದ ಕಾರಣವೇನು? ಅವ್ರ ಬಾಯಲ್ಲೇ ಕೇಳಿ....
 

Follow Us:
Download App:
  • android
  • ios