Asianet Suvarna News Asianet Suvarna News

ಅಂದು ಬಿಎಸ್‌ವೈಗೆ ಅಧಿಕಾರ ಕೊಟ್ಟಿದ್ರೆ ಕಾಂಗ್ರೆಸ್ ನಿರ್ನಾಮವಾಗ್ತಿತ್ತು: ಕುಮಾರಸ್ವಾಮಿ

ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಿಂದಲೂ ಕೇವಲ ಗ್ಯಾರಂಟಿಗಳನ್ನು ಜನರಿಗೆ ತೋರಿಸುತ್ತಿದ್ದಾರೆ. ಈ ಯೋಜನೆಗಳಿಗಾಗಿ 1.20 ಲಕ್ಷ ಕೋಟಿ ರು. ಸಾಲ ಮಾಡಿ, ಪ್ರತಿ ಪ್ರಜೆ ಮೇಲೆ 35,000 ಸಾಲ ಹೊರೆಸಿದ್ದಾರೆ. ಇದೊಂದು ದರಿದ್ರ ಸರ್ಕಾರವಾಗಿದೆ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 

Former CM HD Kumaraswamy Slams Congress grg
Author
First Published Apr 20, 2024, 6:18 AM IST

ಶಿರಾ(ಏ.20): 2006ರಲ್ಲಿ ಯಡಿಯೂರಪ್ಪ ಅವರ ಜೊತೆ ಉತ್ತಮ ಆಡಳಿತ ನೀಡಿದ್ದೇವೆ. ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಒಪ್ಪಿದ್ದೆ. ಆದರೆ, ಕೆಲವರಿಂದ ಅದು ಸಾಧ್ಯವಾಗಲಿಲ್ಲ. ಯಡಿಯೂರಪ್ಪ ಅವರಿಗೆ ಅಂದು ಅಧಿಕಾರ ಹಸ್ತಾಂತರಿಸಿದ್ದರೆ, ಕಾಂಗ್ರೆಸ್ ನಿರ್ನಾಮ ಆಗುತ್ತಿತ್ತು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ತುಮಕೂರು ಜಿಲ್ಲೆ ಶಿರಾದ ಪ್ರಚಾರ ಸಭೆಯಲ್ಲಿ ಮಾತನಾಡಿ, ದೇಶದ ಭದ್ರತೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಅವಶ್ಯಕತೆಯಿದೆ ಎಂದರು. ರಾಜ್ಯದ ಕಾಂಗ್ರೆಸ್ ಸರ್ಕಾರ ಕಳೆದ 10 ತಿಂಗಳಿಂದಲೂ ಕೇವಲ ಗ್ಯಾರಂಟಿಗಳನ್ನು ಜನರಿಗೆ ತೋರಿಸುತ್ತಿದ್ದಾರೆ. ಈ ಯೋಜನೆಗಳಿಗಾಗಿ 1.20 ಲಕ್ಷ ಕೋಟಿ ರು. ಸಾಲ ಮಾಡಿ, ಪ್ರತಿ ಪ್ರಜೆ ಮೇಲೆ 35,000 ಸಾಲ ಹೊರೆಸಿದ್ದಾರೆ. ಇದೊಂದು ದರಿದ್ರ ಸರ್ಕಾರವಾಗಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಮೂಲಕ ಮಹಿಳೆಯರ ಖಾತೆಗೆ 2000 ರು.ನೀಡಿದೆ. ಆದರೆ, ಮದ್ಯದ ಬೆಲೆಯನ್ನು ಹೆಚ್ಚಿಸಿದೆ. ಅದರ ಜೊತೆಗೆ ಇತರ ವಸ್ತುಗಳ ಮೇಲಿನ ತೆರಿಗೆ ಹೆಚ್ಚಿಸಿದೆ. ಆ ಮೂಲಕ ಇದೊಂದು ಪಿಕ್‌ ಪಾಕೆಟ್‌ ಸರ್ಕಾರವಾಗಿದೆ. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದೆ. ಆದರೆ, ನಾನೆಂದೂ ಕೇಂದ್ರದ ಮುಂದೆ ಕೈಚಾಚಿಲ್ಲ ಎಂದರು.

ಕೇಂದ್ರ ಸರ್ಕಾರ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ: ಚಲುವರಾಯಸ್ವಾಮಿ

ಚೊಂಬು ಜಾಹೀರಾತಿಗೆ ಎಚ್ಡಿಕೆ ಕಿಡಿ:

ಪತ್ರಿಕೆಯಲ್ಲಿ ಇಂದು ದೊಡ್ಡದಾಗಿ ಖಾಲಿ ಚೊಂಬಿನ ಜಾಹೀರಾತನ್ನು ರಾಜ್ಯ ಸರ್ಕಾರ ನೀಡಿದೆ. ಇದರಿಂದ ಕೇಂದ್ರ ಸರ್ಕಾರದ ಅನುದಾನವನ್ನು ರಾಜ್ಯ ಸರ್ಕಾರ ಲೂಟಿ ಮಾಡಿದೆ ಎಂಬುದು ಅರ್ಥವಾಗುತ್ತದೆ. ಇದು ಕಾಂಗ್ರೆಸ್ಸಿಗರ ನಡವಳಿಕೆ, ಕೀಳು ಅಭಿರುಚಿಯನ್ನು ಎತ್ತಿ ತೋರಿಸುತ್ತದೆ. ಅಲ್ಲಿ ಚೊಂಬಿನ ಬದಲು, ಜನರಿಂದ ತೆರಿಗೆ ರೂಪದಲ್ಲಿ ಹಣ ಲೂಟಿ ಹೊಡೆದು ಹೊತ್ತೊಯ್ಯುವ ಚಿತ್ರ ಇರಬೇಕಿತ್ತು ಎಂದು ಕಾಂಗ್ರೆಸ್‌ ವಿರುದ್ಧ ವ್ಯಂಗ್ಯವಾಡಿದರು.

Follow Us:
Download App:
  • android
  • ios