ಹೆಲಿಕಾಪ್ಟರ್ನಿಂದ ಹಾರುವ ಮುನ್ನ ಖಳನಟ ಉದಯ್ ಕೊನೆಯದಾಗಿ ಸುವರ್ಣ ನ್ಯೂಸ್'ಗೆ ಹೇಳಿದ್ದು...!
ಈ ಶೂಟಿಂಗ್'ಗೆ ಹೊರಡುವ ಮುನ್ನ ಉದಯ್ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ್ದು, ದೇವರ ಮೇಲೆ ಭಾರ ಹಾಕಿ ಈ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರು(ನ.07): ಒಂದು ಪ್ಲೋರ್ ಮೇಲಿನಿಂದ ಕೆಳಗೆ ಬಗ್ಗಿ ನೋಡಿದರೆ ನನಗೆ ತಲೆ ಸುತ್ತವಂತೆ ಆಗುತ್ತದೆ ಎನ್ನುವ ಖಳನಟ ಉದಯ್ ಇಂದು ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ ಜಲಾಶಯಕ್ಕೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಶೂಟಿಂಗ್'ಗೆ ಹೊರಡುವ ಮುನ್ನ ಉದಯ್ ಸುವರ್ಣ ನ್ಯೂಸ್'ನೊಂದಿಗೆ ಮಾತನಾಡಿದ್ದು, ದೇವರ ಮೇಲೆ ಭಾರ ಹಾಕಿ ಈ ಪ್ರಯತ್ನಕ್ಕೆ ಕೈ ಹಾಕುತ್ತಿರುವುದಾಗಿ ಹೇಳಿಕೆ ನೀಡಿದ್ದಾರೆ.
ಮೊದಲ ಬಾರಿಗೆ ಎತ್ತರದಿಂದ ಹಾರುತ್ತಿದ್ದೇನೆ, ಹೆಲಿಕಾಪ್ಟರ್ ಹತ್ತುತ್ತಿರುವುದು ಇದೇ ಮೊದಲು ಎಂದು ಮಾತನಾಡಿದ ಉದಯ್, ದೇವರ ಮೇಲೆ ಭಾರ ಹಾಕಿ ಕೆಳಗೆ ಹಾರುತ್ತೇನೆ ಎಂದಿದ್ದಾರೆ,
ಮಾಸ್ತಿಗುಡಿ ಸಿನಿಮಾ ಕ್ಲೈಮ್ಯಾಕ್ಸ್ ಶೂಟಿಂಗ್ ವೇಳೆ 100 ಅಡಿ ಎತ್ತರದಿಂದ ಹೆಲಿಕಾಪ್ಟರ್ನಿಂದ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನಾಯಕ ನಟ ದುನಿಯಾ ವಿಜಯ್ ಹಾಗೂ ಸಹ ನಟ ಅನಿಲ್'ನಿಂದಿಗೆ ಉದಯ್ ಹಾರಿದ್ದರು, ದುನಿಯಾ ವಿಜಯ್ ಈಜಿ ದಡ ಸೇರಿದರೆ ಉದಯ್, ಅನಿಲ್ ಸಾವನ್ನಪ್ಪಿದ್ದಾರೆ.