ಬಡವರ ರೇಷನ್ ಕದ್ದು ಮಾರೋ ಕಳ್ಳರು
ಈ ಬಾರಿ ನಮ್ಮ ತಂಡ ಚೇಸ್ ಮಾಡಿರೋದು ಭ್ರಷ್ಟರಲ್ಲಿ ಭ್ರಷ್ಟರನ್ನ,ನೀಚರಲ್ಲಿ ನೀಚರನ್ನ. ಜನಸೇವೆಯ ಮುಖವಾಡ ಹಾಕಿಕೊಂಡು ಜನರ ಅನ್ನಭಾಗ್ಯದ ಅನ್ನವನ್ನೇ ಕದಿಯೋ ಖದೀಮರನ್ನ.
ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ಮತ್ತೊಂದು ಭ್ರಷ್ಟರ ಗುಂಪನ್ನು ಚೇಸ್ ಮಾಡಿ ಅನ್ನಭಾಗ್ಯವನ್ನ ರೇಷನ್ ಅಂಗಡಿಯಿಂದಲೇ ಕದಿಯೋ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಅದು ಹೇಗೆ ಅಂತ ತಿಳಿಯಲು ಈ ವರದಿ ನೋಡಿ.
ಈ ಬಾರಿ ನಮ್ಮ ತಂಡ ಚೇಸ್ ಮಾಡಿರೋದು ಭ್ರಷ್ಟರಲ್ಲಿ ಭ್ರಷ್ಟರನ್ನ,ನೀಚರಲ್ಲಿ ನೀಚರನ್ನ. ಜನಸೇವೆಯ ಮುಖವಾಡ ಹಾಕಿಕೊಂಡು ಜನರ ಅನ್ನಭಾಗ್ಯದ ಅನ್ನವನ್ನೇ ಕದಿಯೋ ಖದೀಮರನ್ನ.
ಈ ಬಾರಿ ನಮ್ಮ ತಂಡ ಭ್ರಷ್ಟರ ಬೇಟೆಯಾಡಲು ಹೊರಟಿದ್ದು ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜಿಲ್ಲೆ ದಾವಣಗೆರೆಗೆ. ಇಲ್ಲಿ ರೇಷನ್ ಮಾಫಿಯಾ ಭಯಾನಕ ರೂಪದಲ್ಲಿ ನಡೆಯುತ್ತಿದೆ. ಈ ಖದೀಮರ ಬಣ್ಣ ಬಯಲು ಮಾಡೋ ಸಲುವಾಗಿಯೇ ನಮ್ಮ ತಂಡ ರಹಸ್ಯ ಕಾರ್ಯಾಚರಣೆ ಮುಂದಾಗಿ ದಾವಣಗೆರೆಯ ಕೆಲ ಭ್ರಷ್ಟ ನ್ಯಾಯಬೆಲೆ ಅಂಗಡಿಯಿಂದಲೇ ಪ್ರತಿ ನಿತ್ಯ ರಾತ್ರಿ ಹಗಲೆನ್ನದೆ ಆಟೋ ರಿಕ್ಷಾ, ಓಮನಿ ಗಾಡಿಯಲ್ಲಿ ಪಡಿತರ ಪದಾರ್ಥಗಳನ್ನ ಅಕ್ರಮವನ್ನ ಸಾಗಿಸುತ್ತಿರುವುದನ್ನ ಪತ್ತೆ ಹಚ್ಚಿದೆ.
ಈ ಕದ್ದ ರೇಷನ್ ಎಲ್ಲಾ ದಾವಣಗೆರೆಯ ಜಯಣ್ಣ ಹಾಗೂ ಬಾತಿಯ ಉಮಣ್ಣ ಅಲಿಯಾಸ್ ಉಮಾಪತಿ ಗೋಡೌನ್ಗೆ ಬಂದು ಸೇರುತ್ತೆ. ಇದೂ ಕೂಡ ನಮ್ಮ ರಹಸ್ಯ ಕಾರ್ಯಾಚರಣೆಯಿಂದ ಬಯಲಾಯ್ತು.
ಜಯಣ್ಣ ಹಾಗೂ ಉಮಾಪತಿಯವರ ಗೋಡೌನ್ನಿಂದ ಈ ಅನ್ನಭಾಗ್ಯದ ಅಕ್ಕಿ ಎಲ್ಲಿ ಹೋಗಿ ಸೇರುತ್ತೆ ಅಂತ ಮತ್ತೆ ನಾವು ಚೇಸ್ ಮಾಡಿದಾಗ ಅದು ಹೊನ್ನಾಳಿಯ ಶಂಕರ್ ರೈಸ್ ಮಿಲ್ಗೆ ಬಂದು ತಲುಪುತ್ತೆ. ಇಲ್ಲಿ ಅನ್ನ ಭಾಗ್ಯದ ಚೀಲದೊಂದಿಗೇ ಲಾರಿ ಅಕ್ಕಿ ಹೊತ್ತು ಬಂದ ದೃಶ್ಯ ಕೂಡ ನಮಗೆ ಸಿಕ್ಕಿದೆ. ಈ ರೈಸ್ ಮಿಲ್ ಕಾಂಗ್ರೆಸ್ನ ಪ್ರಭಾವಿ ನಾಯಕರಿಗೆ ಸೇರಿದ್ದು ಎನ್ನಲಾಗಿದೆ.
ಈ ಭಾರೀ ಮಾಫಿಯಾಕ್ಕೆ ಬ್ರೇಕ್ ಹಾಕೋ ಸಲುವಾಗಿ ಕವರ್ಸ್ಟೋರಿ ತಂಡ ಇದನ್ನ ಆಹಾರ ಸಚಿವ ಯು.ಟಿ ಖಾದರ್ ಅವರಿಗೆ ಮಾಹಿತಿ ನೀಡಿತು. ಸಚಿವರು ತಕ್ಷಣ ಎಚ್ಚೆತ್ತುಕೊಂಡು ದಾವಣಗೆರೆಯ ಆಹಾರ ಉಪನಿರ್ದೇಶಕರಿಗೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ್ರು. ಅಧಿಕಾರಿಗಳು ಉಮಾಪತಿ ಗೋಡೌನ್ ರೈಡ್ ಮಾಡಿ ಆಹಾರ ಇಲಾಖೆಗೆ ಸೇರಿದ 112 ಕ್ವಿಂಟಾಲ್ ಅಕ್ಕಿ ಹಾಗೂ 4 ಕ್ವಿಂಟಾಲ್ ವಶಪಡಿಸಿಕೊಂಡರು. ಬಳಿಕ ಗೋಡೋನ್ ಮಾಲೀಕ ಬಾತಿ ಉಮಾಪತಿ ಎಂಬುವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ವರದಿ: ರಂಜಿತ್ ಕುಮಾರ್ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್