Asianet Suvarna News Asianet Suvarna News

ಅಖಿಲೇಶ್ ಗೆ ಮುಸ್ಲೀಂಮರ ಬಗ್ಗೆ ನಕಾರಾತ್ಮಕ ಧೋರಣೆಯಿದೆ :ಮುಲಯಾಂ ಸಿಂಗ್

ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಗನ ಕಿತ್ತಾಟ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ಕುಟುಂಬ ರಾಜಕಾರಣದ ಕಾವು ಹೆಚ್ಚಾಗಿದೆ. ಇಂದು ಮುಲಯಾಂ ಸಿಂಗ್  ಮಗ ಅಖಿಲೇಶ್ ಯಾದವ್ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ.

Mulayam Singh Akhilesh has negative approach towards Muslims  I may contest against him

ಲಕ್ನೋ (ಜ.16): ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಅಪ್ಪ ಮಗನ ಕಿತ್ತಾಟ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಚುನಾವಣೆ ಸಮೀಪಿಸುತ್ತಿರುವಾಗ ಕುಟುಂಬ ರಾಜಕಾರಣದ ಕಾವು ಹೆಚ್ಚಾಗಿದೆ. ಇಂದು ಮುಲಯಾಂ ಸಿಂಗ್  ಮಗ ಅಖಿಲೇಶ್ ಯಾದವ್ ಮೇಲೆ ಮತ್ತೊಂದು ಆರೋಪ ಮಾಡಿದ್ದಾರೆ.

ಅಖಿಲೇಶ್ ಯಾದವ್ ಮುಸ್ಲೀಂಮರ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿದ್ದಾನೆ. ನನ್ನ ಸಲಹೆ ಕೇಳದಿದ್ದರೆ ಅವನ ವಿರುದ್ಧವೇ ಸ್ಪರ್ಧಿಸುತ್ತೇನೆ ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.

ಸೈಕಲ್ ಚಿಹ್ನೆ ಯಾರ ಬಳಿ ಉಳಿಯಲಿದೆ ಎಂಬುದರ ಕುರಿತು ಮಾತುಕತೆ ನಡೆಸಲು ಚುನಾವಣಾ ಆಯೋಗ  ಮುಲಯಾಂ ಹಾಗೂ ಅಖಿಲೇಶ್ ರನ್ನು ಇಬ್ಬರನ್ನು ಕರೆದಿತ್ತು. ಸೈಕಲ್ ಚಿಹ್ನೆ ಯಾರಿಗೆ ಸೇರಬೇಕು ಎಂಬುದು ಚುನಾವಣಾ ಆಯೋಗದ ನಿರ್ಧಾರ ಆದರೆ ಚಿಹ್ನೆಗಾಗಿ ನ್ಯಾಯಾಲಯದ ಮೆಟ್ಟಲೇರಲು ಸಿದ್ಧ ಎಂದು ಮುಲಯಾಂ ಸಿಂಗ್ ಹೇಳಿದ್ದಾರೆ.

 

Follow Us:
Download App:
  • android
  • ios