ನೀರು ಬಿಟ್ಟರೆ ಸುಮ್ಮನಿರುವುದಿಲ್ಲ
ಮಂಡ್ಯ(ಸೆ.27): ಇನ್ನೂ ಕಾವೇರಿ ಕೊಳ್ಳದಲ್ಲಿ ಆಕ್ರೋಶ ಭುಗಿಲೆದ್ದಿದೆ. ಮಂಡ್ಯ, ಮೈಸೂರು, ಪ್ರತಿಭಟನೆಗಳು ನಡೆದಿವೆ. ಮಂಡ್ಯದಲ್ಲಿ ಬೆಂಗಳೂರು ಮೈಸೂರು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ತಮಿಳುನಾಡಿಗೆ ನೀರು ಬಿಡದಂತೆ ಆಗ್ರಹಿಸಿದರು. ಸುಪ್ರೀಂ ಆದೇಶದಂತೆ ಎಲ್ಲಾದರೂ ನೀರು ಬಿಟ್ಟರೆ ಉಗ್ರ ಹೋರಾಟ ಮಾಡೋದಾಗಿ ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಮಾದೇಗೌಡ ಎಚ್ಚರಿಸಿದ್ದಾರೆ. ಕೆಆರ್'ಎಸ್ ಅಧಿಕಾರಿಗಳಿಂದ ಕೀ ಕಿತ್ತುಕೊಳ್ಳುವ ಎಚ್ಚರಿಕೆ ನೀಡಿದರು.