ಗೋವಾದಲ್ಲಿ ಕನ್ನಡಿಗರ ಮೇಲೆ ಮಾರಣಾಂತಿಕ ಹಲ್ಲೆ!
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಘಟನೆ ನೋಡನೋಡುತ್ತಿದ್ದಂತೆ ಭಾಷಾ ವೈಷಮ್ಯಕ್ಕೆ ತಿರುವು ಪಡೆದಿದೆ. ವಿಕೋಪಕ್ಕೆ ತಿರುಗಿದ ಈ ಜಗಳ 'ನೀವು ಕನ್ನಡಿಗರು ಜಗಳಗಂಟರು ಎಂದು ನಿಮಗೆ ಮಹದಾಯಿ ನೀರು ಬೇಕೇ' ಎಂದು ಊರಿನ ಜನರೆಲ್ಲಾ ಸೇರಿ 7 ಕುಟುಂಬಗಳ ಮೇಲೆ ಹಲ್ಲೆ ಮಾಡಿ ಮನೆ ವಾಹನಗಳನ್ನು ಜಖಂ ಮಾಡಿದ್ದಾರೆ. ಪೊಂಡಾದ ಟಿಸ್ ಉಸಗಾಂ ಪ್ರದೇಶದಲ್ಲಿ ಘಟನೆ ನಡೆದಿದ್ದು. ಪೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐ.ಪಿ.ಸಿ 143,147,148,504,506, (II) 323, 324, 307, 397, 354. 380, R/w 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೋವಾ(ಅ.22): ಗೋವಾ ಕನ್ನಡಿಗರ ಮೇಲೆ ಗೋವಾ ಕೊಂಕಣಿ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕನ್ನಡಿಗರ ಮನೆಗಳನ್ನು ಸುಟ್ಟು ತಮ್ಮ ಪ್ರತಿಕಾರ ತೀರಿಸಿಕೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಘಟನೆ ನೋಡನೋಡುತ್ತಿದ್ದಂತೆ ಭಾಷಾ ವೈಷಮ್ಯಕ್ಕೆ ತಿರುವು ಪಡೆದಿದೆ. ವಿಕೋಪಕ್ಕೆ ತಿರುಗಿದ ಈ ಜಗಳ 'ನೀವು ಕನ್ನಡಿಗರು ಜಗಳಗಂಟರು ಎಂದು ನಿಮಗೆ ಮಹದಾಯಿ ನೀರು ಬೇಕೇ' ಎಂದು ಊರಿನ ಜನರೆಲ್ಲಾ ಸೇರಿ 7 ಕುಟುಂಬಗಳ ಮೇಲೆ ಹಲ್ಲೆ ಮಾಡಿ ಮನೆ ವಾಹನಗಳನ್ನು ಜಖಂ ಮಾಡಿದ್ದಾರೆ.
ಪೊಂಡಾದ ಟಿಸ್ ಉಸಗಾಂ ಪ್ರದೇಶದಲ್ಲಿ ಘಟನೆ ನಡೆದಿದ್ದು. ಪೊಂಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐ.ಪಿ.ಸಿ 143,147,148,504,506, (II) 323, 324, 307, 397, 354. 380, R/w 149 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಗೋವಾದಿಂದಲೇ ಊರು ಬಿಡಿಸಿದ ಗೋವಾ ಕೊಂಕಣಿ ಜನರ ಕಾಟಕ್ಕೆ ಬೆದರಿದ ಕನ್ನಡಿಗರು ಇಂದು ಬೆಳಗಾವಿ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರಕ್ಕೆ ಸೂಕ್ತ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.