Asianet Suvarna News Asianet Suvarna News

'ಬಿಎಸ್'ವೈ-ಈಶ್ವರಪ್ಪ ಗುದ್ದಾಟ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರದು'

ಇಬ್ಬರೂ ಕೂಡಾ ಬಿಜೆಪಿಯ ಪ್ರಮುಖ ನಾಯಕರು, ಅವರಲ್ಲಿ ಭಿನ್ನಾಭಿಪ್ರಾಯ ಬರಬಾರದಿತ್ತು ಎಂದಿರುವ ಶ್ರೀನಿವಾಸ್ ಪ್ರಸಾದ್, ಅವರಿಬ್ಬರ ಗುದ್ದಾಟ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಹೇಳಿದ್ದಾರೆ.

BSY Eshwarappa Infighting Will Not Affect Election Prospectus Says Shrinivas Prasad

ಮೈಸೂರು (ಜ.14): ಬಿಎಸ್‌ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಭಿನ್ನಾಭಿಪ್ರಾಯ ಕುರಿತು ಮಾತನಾಡಿರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್, ರಾಜಕೀಯ ಪಕ್ಷಗಳಲ್ಲಿ ಭಿನ್ನಾಭಿಪ್ರಾಯ ಸಹಜ, ಹಿರಿಯರು ಕುಳಿತು ಅದನ್ನು ಬಗೆಹರಿಸುತ್ತಾರೆ ಎಂದು ಹೇಳಿದ್ದಾರೆ.

ಇಬ್ಬರೂ ಕೂಡಾ ಬಿಜೆಪಿಯ ಪ್ರಮುಖ ನಾಯಕರು, ಅವರಲ್ಲಿ ಭಿನ್ನಾಭಿಪ್ರಾಯ ಬರಬಾರದಿತ್ತು ಎಂದಿರುವ ಶ್ರೀನಿವಾಸ್ ಪ್ರಸಾದ್, ಅವರಿಬ್ಬರ ಗುದ್ದಾಟ ಮುಂದಿನ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲವೆಂದು ಹೇಳಿದ್ದಾರೆ.

ತಾನೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆಗಿನ ಭಿನ್ನಾಭಿಪ್ರಾಯದಿಂದಲೇ ಬಿಜೆಪಿ ಸೇರಿದೆ ಎಂದೂ ಈ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ಶ್ರೀನಿವಾಸಪ್ರಸಾದ್ ಕಾಂಗ್ರೆಸ್ ಪಕ್ಷವನ್ನು ತೊರದು ಇತ್ತೀಚೆಗಷ್ಠೇ ಬಿಜೆಪಿಗೆ ಸೇರಿದ್ದಾರೆ.

Follow Us:
Download App:
  • android
  • ios