ಸುನಾಮಿ ಕಿಟ್ಟಿ ಈಗ ಹೀರೋ!
ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿಬೆಳ್ಳಿತೆರೆಗೆ ಎಂಟ್ರಿ ಆಗಿದ್ದಾರೆ. ಪಿ ಮೂರ್ತಿ ನಿರ್ದೇಶನದ ‘ಆದಿವಾಸಿ 'ಚಿತ್ರದಲ್ಲಿ ಕಿಟ್ಟಿಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಶೀರ್ಷಿಕೆಗೆ ತಕ್ಕಂತೆ ಈ ಚಿತ್ರ ಕಾಡು ಜನರ ಬದುಕಿನ ತಳಮಳಗಳನ್ನೇ ಬಿಂಬಿಸಲಿದೆ.
ಬೆಂಗಳೂರು(ಫೆ.27): ರಿಯಾಲಿಟಿ ಸ್ಟಾರ್ ಸುನಾಮಿ ಕಿಟ್ಟಿಬೆಳ್ಳಿತೆರೆಗೆ ಎಂಟ್ರಿ ಆಗಿದ್ದಾರೆ. ಪಿ ಮೂರ್ತಿ ನಿರ್ದೇಶನದ ‘ಆದಿವಾಸಿ 'ಚಿತ್ರದಲ್ಲಿ ಕಿಟ್ಟಿಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರಂತೆ. ಶೀರ್ಷಿಕೆಗೆ ತಕ್ಕಂತೆ ಈ ಚಿತ್ರ ಕಾಡು ಜನರ ಬದುಕಿನ ತಳಮಳಗಳನ್ನೇ ಬಿಂಬಿಸಲಿದೆ.
ಮೂಲತಃ ಹೆಗ್ಗಡದೇವನಕೋಟೆ ಆದಿವಾಸಿ ಸಮುದಾಯದಿಂದ ಬಂದ ಕಿಟ್ಟಿಗೆ ಇಂಥದೊಂದು ಕತೆ ಸಿಕ್ಕಿದ್ದು ಖುಷಿ ನೀಡಿದೆ. ಸದ್ಯಕ್ಕೆ ಸುನಾಮಿ ಕಿಟ್ಟಿ ಪ್ರಮುಖ ಆಕರ್ಷಣೆ. ನಾಯಕಿ ಯಾರು ಎನ್ನುವುದು ಇನ್ನು ಗೊತ್ತಾಗಬೇಕಿದೆ. ಉಳಿದಂತೆ ನಿರ್ದೇಶಕ ಮೂರ್ತಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮಾರ್ಚ್ 2 ಕ್ಕೆ ಚಿತ್ರದ ಮುಹೂರ್ತಕ್ಕೂ ದಿನ ನಿಗದಿ ಆಗಿದೆ. ಅಂದಹಾಗೆ ‘ಡ್ಯಾನ್ಸಿಂಗ್ ಸ್ಟಾರ್', ‘ಇಂಡಿಯನ್' ಸೇರಿದಂತೆ ಹಲವು ಶೋಗಳಲ್ಲಿ ಗೆದ್ದು ‘ಬಿಗ್ಬಾಸ್'ಗೂ ಕಾಲಿಟ್ಟು ಮನೆಮಾತಾದ ಕಿಟ್ಟಿಅವರ ಚಿತ್ರವೊಂದು ಹಿಂದೆ ಸೆಟ್ಟೇರಿತ್ತು, ಅನಂತರ ಆ ಬಗ್ಗೆ ಸುದ್ದಿ ಬರಲೇ ಇಲ್ಲ, ಅಧಿಕೃತವಾಗಿ ಇದು ಅವರ ಮೊದಲ ಚಿತ್ರವಾಗಬಹುದೋ ಏನೋ?