Asianet Suvarna News Asianet Suvarna News

ವೀರೇಂದ್ರ ಸೆಹ್ವಾಗ್ ಕಾಲೆಳೆದ ಗಂಗೂಲಿ!

ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹಾಗೂ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ನಡುವೆ ಸ್ವಾರಸ್ಯಕರ ಸಂಭಾಷಣೆ ನಡೆಯಿತು. ವಿರಾಟ್‌ ಕೊಹ್ಲಿ ರನ್‌ ಕದಿಯುವ ಸಂದರ್ಭದಲ್ಲಿ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದ ವೀರೂ, ಸೌರವ್‌ ನೀವು ಸಹ ವಿಕೆಟ್‌ಗಳ ನಡುವೆ ಓಡುವುದರಲ್ಲಿ ಚತುರರು ಎಂದರು. 

You still have to give an interview in front of me

ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯದ ವೇಳೆ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಸೌರವ್‌ ಗಂಗೂಲಿ ಹಾಗೂ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್‌ ನಡುವೆ ಸ್ವಾರಸ್ಯಕರ ಸಂಭಾಷಣೆ ನಡೆಯಿತು. ವಿರಾಟ್‌ ಕೊಹ್ಲಿ ರನ್‌ ಕದಿಯುವ ಸಂದರ್ಭದಲ್ಲಿ ಪಂದ್ಯದ ವೀಕ್ಷಕ ವಿವರಣೆ ಮಾಡುತ್ತಿದ್ದ ವೀರೂ, ಸೌರವ್‌ ನೀವು ಸಹ ವಿಕೆಟ್‌ಗಳ ನಡುವೆ ಓಡುವುದರಲ್ಲಿ ಚತುರರು ಎಂದರು. 

ತಕ್ಷಣ ಪ್ರತಿಕ್ರಿಯಿಸಿದ ಗಂಗೂಲಿ, ‘ಖಂಡಿತವಾಗಿಯೂ, ನಾನು ವಿಕೆಟ್‌ಗಳ ನಡುವೆ ಅತ್ಯಂತ ವೇಗವಾಗಿ ಓಡುತ್ತಿದ್ದೆ' ಎಂದರು. ಈ ವೇಳೆ ‘ಹೌದು ಹೌದು ಕೊಹ್ಲಿಯಷ್ಟುವೇಗವಾಗಿ ಓಡಲು ನಿಮ್ಮಿಂದ ಮಾತ್ರ ಸಾಧ್ಯ' ಎಂದು ಸೆಹ್ವಾಗ್‌, ಗಂಗೂಲಿ ಕಾಲೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ, ‘ಪಂದ್ಯಾವಳಿ ಮುಗಿದ ಬಳಿಕ ಮತ್ತೆ ಓವಲ್‌ನಲ್ಲಿ ಸಿಗೋಣ. 100 ಮೀಟರ್‌ ಓಟದ ಸ್ಪರ್ಧೆ ಏರ್ಪಡಿಸೋಣ. ಯಾರು ಗೆಲ್ಲುತ್ತಾರೋ ನೋಡೋಣ' ಎಂದು ಸೆಹ್ವಾಗ್‌ಗೆ ಸವಾಲೆಸೆದರು. ‘ನೀವೇ ಗೆಲ್ಲುತ್ತೀರಿ ಬಿಡಿ' ಎಂದು ಸೆಹ್ವಾಗ್‌ ಪ್ರತಿಕ್ರಿಯಿಸಿದರು. ಈ ವೇಳೆ ನೀವು ಎಷ್ಟುಸಿಂಗಲ್‌ ರನ್‌ಗಳನ್ನು ತೆಗೆದುಕೊಂಡಿದ್ದೀರಾ. ಎಷ್ಟುರನ್‌ ಓಡಿದ್ದೀರಿ ಎಂಬುದು ಅಂಕಿ ಅಂಶಗಳನ್ನು ಪರಿಶೀಲಿಸಿದರೆ ತಿಳಿಯುತ್ತದೆ ಎಂದು ಸೆಹ್ವಾಗ್‌ ಹೇಳುತ್ತಿದ್ದಂತೆ, ‘ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಿ. ಮೊದಲು ನಿಮ್ಮ ಅಂಕಿ ಅಂಶಗಳನ್ನು ನೋಡಿಕೊಳ್ಳಿ. ನೀವು ನನ್ನ ಮುಂದೆ ಭಾರತ ಕೋಚ್‌ ಹುದ್ದೆಯ ಸಂದರ್ಶನ ನೀಡಬೇಕಿದೆ' ಎಂದು ಹಾಸ್ಯದ ದಾಟಿಯಲ್ಲಿ ಚಾಟಿ ಬೀಸುತ್ತಿದ್ದಂತೆ ವೀಕ್ಷಕ ವಿವರಣೆ ಕೊಠಡಿ ನಗೆ ಗಡಲಲ್ಲಿ ಮುಳುಗಿತು.

Follow Us:
Download App:
  • android
  • ios