IPLನಲ್ಲಿ ಬಿಖರಿಯಾಗದ ಲೆಜೆಂಡ್ ಬೌಲರ್ ಇರ್ಫಾನ್ ಪಠಾಣ್
ಈತ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಗ್ರೇಟ್ ಬೌಲರ್. ತನ್ನ ಸ್ವಿಂಗ್ ಬೌಲಿಂಗ್ನಿಂದ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಟ ಬ್ಯಾಟ್ಸ್'ಮನ್'ಗಳನ್ನೇ ಮಕಾಡೆ ಮಲಗಿಸಿದ ಲೆಜಂಡರಿ ಬೌಲರ್ ಇಂದು ಯಾರಿಗೂ ಬೇಡವಾಗಿದ್ದಾರೆ. ಇತನ ಡೆಡ್ಲಿ ಬೌಲಿಂಗನ್ನ ಕೇಳುವವರೇ ಇಲ್ಲದಂತಾಗಿದೆ. ಯಾರು ಆ ಮಹಾನ್ ಬೌಲರ್.? ಏನು ಇವರ ವ್ಯಥೆ.? ಇಲ್ಲಿದೆ ವಿವರ
ಈತ ಟೀಂ ಇಂಡಿಯಾ ಪರ ಟೆಸ್ಟ್ ಕ್ರಿಕೆಟ್'ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಗ್ರೇಟ್ ಬೌಲರ್. ತನ್ನ ಸ್ವಿಂಗ್ ಬೌಲಿಂಗ್ನಿಂದ ಒಂದು ಕಾಲದಲ್ಲಿ ವಿಶ್ವ ಶ್ರೇಷ್ಟ ಬ್ಯಾಟ್ಸ್'ಮನ್'ಗಳನ್ನೇ ಮಕಾಡೆ ಮಲಗಿಸಿದ ಲೆಜಂಡರಿ ಬೌಲರ್ ಇಂದು ಯಾರಿಗೂ ಬೇಡವಾಗಿದ್ದಾರೆ. ಇತನ ಡೆಡ್ಲಿ ಬೌಲಿಂಗನ್ನ ಕೇಳುವವರೇ ಇಲ್ಲದಂತಾಗಿದೆ. ಯಾರು ಆ ಮಹಾನ್ ಬೌಲರ್.? ಏನು ಇವರ ವ್ಯಥೆ.? ಇಲ್ಲಿದೆ ವಿವರ
ಟೆಸ್ಟ್ ಕ್ರಿಕೆಟ್ನ ಹ್ಯಾಟ್ರಿಕ್ ಹೀರೋ: ಟೆಸ್ಟ್ನಲ್ಲಿ ಹ್ಯಾಟ್ರಿಕ್ ಪಡೆದ ಏಕೈಕ ಭಾರತೀಯ
2006 ಪಾಕಿಸ್ತಾನ ವಿರುದ್ಧದ 3ನೇ ಟೆಸ್ಟ್'ನಲ್ಲಿ ನಡೆದ ಈ ಮ್ಯಾಜಿಕ್ ಅನ್ನು ಬಹುಶಃ ಭಾರತಿಯ ಕ್ರಿಕೆಟ್ ಪ್ರೇಮಿಗಳು ಇಂದಿಗೂ ಮರೆತೇ ಇಲ್ಲ. ಅಷ್ಟೇ ಅಲ್ಲ ಇನ್ನೂ ಹತ್ತು ಹಲು ವರ್ಷಗಳು ಇರ್ಫಾನ್ ಪಠಾಣ್ರ ಈ ಅದ್ಭುತ ಸ್ಪೆಲ್ ಅನ್ನು ಮರೆಯಲು ಸಾಧ್ಯವೇ ಇಲ್ಲ. ಅಷ್ಟರ ಮಟ್ಟಿಗೆ ಅಂದು ಭಾರತದ ಮಹಾನ್ ಬೌಲರ್ ಒಬ್ಬ ಭಾರತದ ಬಧ್ಧ ವೈರಿ ಪಾಕಿಸ್ತಾನ ವಿರುದ್ಧ ಹ್ಯಾಟ್ರಿಕ್ ಪಡೆದು ಎಲ್ಲರ ಉಬ್ಬೇರಿಸುವಂತೆ ಮಾಡಿಬಿಟ್ಟಿದ್ದ.
ಈತನ ಸ್ವಿಂಗ್ ಬೌಲಿಂಗ್ಗೆ ವಿಶ್ವವೇ ಸಲಾಂ: ಸ್ವಿಂಗ್ ಮ್ಯಜಿಷಿಯನ್ ಇರ್ಫಾನ್ ಪಠಾಣ್
21ರ ಶತಮಾನದ ಆರಂಭದಲ್ಲಿ ತನ್ನ ಸ್ವಿಂಗ್ ಬೌಲಿಂಗ್ನಿಂದ ಏಲ್ಲರ ಗಮನ ಸೆಳದಿದ್ದ ಇರ್ಫಾನ್ ಪಠಾಣ್ ಬೌಲಿಂಗ್ಗೆ ವಿಶ್ವವೇ ದಂಗಾಗಿತ್ತು. ಇರ್ಫಾನ್ರನ್ನ ಸ್ವಿಂಗ್ ಮೆಜಿಷಿಯನ್ ಎಂದೆ ಕರೆಯುತಿದ್ದರು. ಈತ ಬೌಲಿಂಗ್ಗೆ ಇಳಿದ ಅಂದ್ರೆ ಏದುರಾಳಿ ಬ್ಯಾಟ್ಸ್ಮನ್ಗಳು ತಲೆಕೆಡಸಿಕೊಳ್ತಿದ್ರು. ಯಾಕಾದ್ರು ಈತ ಬೌಲಿಂಗ್ಗೆ ಬಂದನೋ ಅನ್ನುತಿದ್ರು.
IPLನಲ್ಲಿ ಬಿಖರಿಯಾಗದ ಲೆಜೆಂಡ್ ಬೌಲರ್: ಸ್ವಿಂಗ್ ಮ್ಯಜಿಷಿಯನ್'ಗೆ ಈ ಗತಿ ಬರಲು ಕಾರಣವೇನು
ಇಂತಹ ಮಹಾನ್ ಬೌಲರ್ ಇಂದು ಯಾರಿಗೂ ಬೇಡವಾಗಿದ್ದಾರೆ. ಇತ್ತೀಚೆಗೆ ನಡೆದ 2017ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೇಯಲ್ಲಿ ವಿದೇಶಿ ಬೌಲರ್ಗಳನ್ನ ಕೋಟಿ ಕೋಟಿ ಕೊಟ್ಟು ಖರೀಸಿಸಿದ IPL ಫ್ರಾಂಚೈಸಿಗಳು ಇರ್ಫಾನ್ ಪಠಾಣ್'ರಂತಹ ಆಕ್ರಮಣಕಾರಿ ಬೌಲರ್'ಗೆ ಕನಿಷ್ಠ 50 ಲಕ್ಷವನ್ನು ಕೊಡಲು ಮನಸ್ಸು ಮಾಡಲಿಲ್ಲ. ಇದರಿಂದ ಇರ್ಫಾನ್ ಈ ಬಾರಿ IPL ಆಡುತ್ತಿಲ್ಲ.
ಇರ್ಫಾನ್ ಪಠಾಣ್'ರ ಈ ಸ್ಥಿತಿಗೆ ಕಾರಣವೂ ಇದೆ. ಇರ್ಫಾನ್ ಟೀಂ ಇಂಡಿಯಾ ಪ್ರತಿನಿಧಿಸಿ 4 ವರ್ಷಗಳಾಗಿವೆ. 2012ರಲ್ಲಿ ಅಕ್ಟೋಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ್ದ ಪಂದ್ಯವೇ ಇರ್ಫಾನ್'ಗೆ ಕೊನೆ ಪಂದ್ಯವಾಗಿತ್ತು. ಅಂದು ಗಾಯಾಳುವಾಗಿ ಹೊರಬಿದ್ದ ಬರೋಡಾ ಎಕ್ಸ್ಪ್ರೆಸ್ ಇಂದಿಗೂ ಟೀಂ ಇಂಡಿಯಾದ ಕದವನ್ನ ತಟ್ಟುತ್ತಲೇ ಇದ್ದಾರೆ.
ಸತತವಾಗಿ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಪಠಾಣ್ ಇನ್ನೇನು ಟೀಂ ಇಂಡಿಯಾಗೆ ಮತ್ತೆ ಸೆಲೆಕ್ಟ್ ಆಗ್ತೀನಿ ಅನ್ನುವಾಗ್ಲೆ ಗಾಯಾಳುವಾಗಿಬಿಡುತಿದ್ದರು. ಇದು ಅವರ ಕಮ್ಬ್ಯಾಕ್ ಕನಸ್ಸನ್ನ ಕನಸಾಗೇ ಉಳಿಸುತಿತ್ತು. ಇನ್ನೂ ಕಳೆದ ಬಾರಿ ಪುಣೆ ವಿರುದ್ಧ ಆಡಿದ್ದ ಇರ್ಫಾನ್ ಗಾಯದ ಸಮಸ್ಯೆಯಿಂದ ಕೇವಲ 2 ಪಂದ್ಯದಲ್ಲಿ ಮಾತ್ರ ಆಡಲು ಸಾಧ್ಯವಾಗಿತ್ತು. ಇಂದೂ ಅಷ್ಟೇ ಎಲ್ಲಾ ಫ್ರಾಂಚೈಸಿಗಳು ಇರ್ಫಾನ್ರನ್ನ ಬಿಡಲು ಕೊಡುತ್ತಿರುವ ಕಾರಣನೇ ಅವರು ಸದಾ ಗಾಯಾಳುವಾಗ್ತಾರೆ ಎಂಬುದು.
ಏನೇ ಆದ್ರೂ ಭಾರತ ಕಂಡ ಅದ್ಭುತ ವೇಗಿಗೆ ಹೀಗಾಗಬಾರದಿತ್ತು. ಆದರೆ ಕಾಲ ಇನ್ನೂ ಮಿಂಚಿಲ್ಲ. ಇರ್ಫಾನ್ ಇದನ್ನೇ ಚಾಲೆಂಜಾಗಿ ಸ್ವೀಕರಿಸಿದಂತಿದೆ. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಅದ್ಭುತ ಸಾಧನೆ ಮಾಡಲಿ ಮತ್ತೆ ಟೀಂ ಇಂಡಿಯಾಗೆ ಕಮ್ಬ್ಯಾಕ್ ಮಾಡಲಿ ಎಂಬುದೆ ಅವರ ಅಭಿಮಾನಿಗಳ ಆಶಯ.