Asianet Suvarna News Asianet Suvarna News

ಮಂಗಳೂರಿನ ದೇವಸ್ಥಾನದಲ್ಲಿ ಅಚ್ಚರಿ ಘಟನೆ, ಗ್ರಾಮಸ್ಥರು ಕಂಗಾಲು

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ.

Villagers Dwelling Near Temple Witness Strange Phenomenon

ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಲ್ಕುಂದದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಅಚ್ಚರಿಯೊಂದು ನಡೆದಿದೆ.

ಮಾ. 11ರಂದು ಬೆಳಿಗ್ಗೆ 4 ಗಂಟೆಯಿಂದ 5 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ  ಜಾಗಟೆ , ಕೊಂಬು ಕಹಳೆಯ ಶಬ್ದ ಕೇಳಿಸಿದೆ ಎಂದು ಹೇಳಲಾಗಿದೆ.

ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ. ನಂತರ ಊರಿನವರು ದೇವಸ್ಥಾನ ಕ್ಕೆ ಬಂದು ನೋಡಿದಾಗ ದೇವಸ್ಥಾನದ  ಸುತ್ತಲೂ ಭಸ್ಮ ಇರುವುದು ಗಮನಕ್ಕೆ ಬಂದಿದೆ.

ದೇವಸ್ಥಾನದ ಬಾಲವನದಿಂದ ನಾಗನಕಟ್ಟೆಯವರೆಗೆ ಈ ಭಸ್ಮ ದ ಸಾಲಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಒಂದೆಡೆ ಇದು ಅಚ್ಚರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಯಾರಾದರೂ ಈ ರೀತಿ ಮಾಡಿರಬಹುದೆ ಎಂಬ ಸಂಶಯವನ್ನು ಸೃಷ್ಟಿಸಿದೆ.

Follow Us:
Download App:
  • android
  • ios