ಮಂಗಳೂರಿನ ದೇವಸ್ಥಾನದಲ್ಲಿ ಅಚ್ಚರಿ ಘಟನೆ, ಗ್ರಾಮಸ್ಥರು ಕಂಗಾಲು
ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ.
ಮಂಗಳೂರು (ಮಾ.16): ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಲ್ಕುಂದದ ಬಸವನಮೂಲೆಯ ಬಸವೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಅಚ್ಚರಿಯೊಂದು ನಡೆದಿದೆ.
ಮಾ. 11ರಂದು ಬೆಳಿಗ್ಗೆ 4 ಗಂಟೆಯಿಂದ 5 ಗಂಟೆ ಸುಮಾರಿಗೆ ದೇವಸ್ಥಾನದಲ್ಲಿ ಜಾಗಟೆ , ಕೊಂಬು ಕಹಳೆಯ ಶಬ್ದ ಕೇಳಿಸಿದೆ ಎಂದು ಹೇಳಲಾಗಿದೆ.
ಈ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಇದೇ ಸಂದರ್ಭದಲ್ಲಿ ಯಾರು ಇಲ್ಲದ ವೇಳೆ ಈ ರೀತಿಯ ಜಾಗಟೆ, ಕೊಂಬು ಕಹಳೆಯ ಶಬ್ದ ಊರಿನವರಿಗೆ ಕೇಳಿಸಿದೆ. ನಂತರ ಊರಿನವರು ದೇವಸ್ಥಾನ ಕ್ಕೆ ಬಂದು ನೋಡಿದಾಗ ದೇವಸ್ಥಾನದ ಸುತ್ತಲೂ ಭಸ್ಮ ಇರುವುದು ಗಮನಕ್ಕೆ ಬಂದಿದೆ.
ದೇವಸ್ಥಾನದ ಬಾಲವನದಿಂದ ನಾಗನಕಟ್ಟೆಯವರೆಗೆ ಈ ಭಸ್ಮ ದ ಸಾಲಿದೆ. ಇದು ಅಚ್ಚರಿಗೆ ಕಾರಣವಾಗಿದೆ. ಒಂದೆಡೆ ಇದು ಅಚ್ಚರಿಗೆ ಕಾರಣವಾಗಿದ್ದರೆ ಮತ್ತೊಂದೆಡೆ ಯಾರಾದರೂ ಈ ರೀತಿ ಮಾಡಿರಬಹುದೆ ಎಂಬ ಸಂಶಯವನ್ನು ಸೃಷ್ಟಿಸಿದೆ.