ಪತಂಜಲಿಯಲ್ಲಿ ಕಳಪೆ ಗುಣಮಟ್ಟ; 6 ಉತ್ಪನ್ನಗಳನ್ನು ಕೂಡಲೇ ಹಿಂತೆಗೆದುಕೊಳ್ಳಲು ಸೂಚನೆ
ಕಳಪೆ ಗುಣಮಟ್ಟ ಕಂಡು ಬಂದ ಹಿನ್ನಲೆಯಲ್ಲಿ ಬಾಬಾ ರಾಮ್ ದೇವ್'ರವರ ಪತಂಜಲಿ 6 ಮೆಡಿಕಲ್ ಉತ್ಪನ್ನಗಳನ್ನು ಕೂಡಲೇ ದೇಶದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ನೇಪಾಳ ಆರೋಗ್ಯ ಸಚಿವಾಲಯ ಹೇಳಿದೆ.
ನವದೆಹಲಿ (ಜೂ.22): ಕಳಪೆ ಗುಣಮಟ್ಟ ಕಂಡು ಬಂದ ಹಿನ್ನಲೆಯಲ್ಲಿ ಬಾಬಾ ರಾಮ್ ದೇವ್'ರವರ ಪತಂಜಲಿ 6 ಮೆಡಿಕಲ್ ಉತ್ಪನ್ನಗಳನ್ನು ಕೂಡಲೇ ದೇಶದ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ನೇಪಾಳ ಆರೋಗ್ಯ ಸಚಿವಾಲಯ ಹೇಳಿದೆ.
ಉತ್ತರಖಂಡದಲ್ಲಿರುವ ದಿವ್ಯ ಫಾರ್ಮಸಿಯಲ್ಲಿ ತಯಾರಾದ 6 ಪತಂಜಲಿ ಉತ್ಪನ್ನಗಳು ಲ್ಯಾಬ್ ಪರೀಕ್ಷೆಯಲ್ಲಿ ವಿಫಲವಾಗಿದ್ದು, ಕಳಪೆ ಗುಣಮಟ್ಟ ಪತ್ತೆಯಾಗಿದೆ ಎಂದು ನೇಪಾಳದ ಔಷಧಿ ಇಲಾಖೆ ಹೇಳಿದೆ. ದಿವ್ಯ ಗಶರ್ ಚೂರ್ಣ, ಬಹುಚಿ ಚೂರ್ಣ, ಆಮ್ಲ ಚೂರ್ಣ, ತ್ರಿಫಲ ಚೂರ್ಣ, ಆದ್ವಿಯ ಚೂರ್ಣ ಮತ್ತು ಅಶ್ವಂಗಂಧ- ಈ ಆರು ಉತ್ಪನ್ನಗಳನ್ನು ಕೂಡಲೇ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕು ಎಂದು ನೇಪಾಳ ಆರೋಗ್ಯ ಸಚಿವಾಲಯ ಹೇಳಿದೆ. ತತ್’ಕ್ಷಣದಿಂದಲೇ ಈ ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲವೆಂದು ದೇಶಾದ್ಯಂತ ಇರುವ ಎಲ್ಲಾ ಮಾರಾಟಗಾರರಿಗೂ ಸೂಚನೆ ನೀಡಿದೆ.
ಈ ಬಗ್ಗೆ ಕಠ್ಮಂಡುವಿನಲ್ಲಿರುವ ಪತಂಜಲಿ ಆಯುರ್ವೇದ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇದುವರೆಗೂ ಬಂದಿಲ್ಲವೆಂದು ಹೇಳಲಾಗಿದೆ.
ಪತಂಜಲಿ ಸೇರಿದಂತೆ ಆಯುರ್ವೇದ ಉತ್ಪನ್ನಗಳು ಎಂದು ಭಾರತದಲ್ಲಿ ಮಾರಾಟ ಮಾಡುವ ಶೇ. 40 ರಷ್ಟು ಉತ್ಪನ್ನಗಳು ಕಳಪೆ ಗುಣಮಟ್ಟದವು ಎಂದು ಆರ್ ಆರ್ ಟಿಐ ಇತ್ತೀಚಿಗೆ ಹೇಳಿದೆ