Asianet Suvarna News Asianet Suvarna News

ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ; ವಿದ್ಯಾರ್ಥಿಯ ಬಲಗೈ ಕತ್ತರಿಸಿದ ದುಷ್ಕರ್ಮಿಗಳು

ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು  ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು  ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

Roudies Cut the hand of Student in Rajagopalanagar

ಬೆಂಗಳೂರು (ಅ.22): ರಾಜಗೋಪಾಲನಗರದಲ್ಲಿ ಪುಂಡರ ಮಾರಾಮಾರಿ ಪ್ರಕರಣ ನಡೆದಿದ್ದು  ಹರ್ಷ ಎಂಬ ವಿದ್ಯಾರ್ಥಿಯ ಬಲಗೈಯನ್ನು  ಪುಂಡಾರಿ ರೌಡಿಗಳು ಕತ್ತರಿಸಿದ್ದಾರೆ.

ಎಸ್ ಎಸ್ ಎಲ್ ಸಿ ಓದುತ್ತಿರುವ ಹರ್ಷನ ಬಲಗೈಯನ್ನು ಪುಂಡರು ಕತ್ತರಿಸಿದ್ದಾರೆ. ಸುಂಕದಕಟ್ಟೆಯಲ್ಲಿರುವ ಲಕ್ಷ್ಮಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ⁠⁠ ಚಿಕಿತ್ಸೆ ಪಡೆಯುತ್ತಿದ್ದು ವೈದ್ಯರು ಕೈಯನ್ನು ಜೋಡಿಸಿದ್ದಾರೆ.

ಸುಮಾರು 20 ಮಂದಿ ದುಷ್ಕರ್ಮಿಗಳಿಂದ ಈ  ಕೃತ್ಯ ನಡೆದಿದೆ.  ಕಿರಣ್ ಅಲಿಯಾಸ್ ಕರಿಬಾಂಡ್ಲಿ,  ದರ್ಶನ್ ಅಲಿಯಾಸ್ ಪಾಪು,  ಸಿಡಿ ಭರತ, ಶರತ್ ಅಲಿಯಾಸ್ ಶಾನ್ , ಪ್ರಶಾಂತ್ ಅಲಿಯಾಸ್ ಕೊಕ್ಕರೆ, ಅಭಿ ಮತ್ತು ಅನಿಲನಿಂದ ಎಂಬುವವರು ಇದರಲ್ಲಿ ಭಾಗಿಯಾಗಿದ್ದಾರೆ.

Follow Us:
Download App:
  • android
  • ios