Asianet Suvarna News Asianet Suvarna News

ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

ಮಳೆಗಾಗಿ ದೇವರ ಮೊರೆ ಹೋದ ಪೊಲೀಸರು

ಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ

 ಪಾವಗಡದಲ್ಲಿ 4 ಠಾಣೆಗಳ ಪೊಲೀಸರಿಂದ ಪೂಜೆ

ನೂರಕ್ಕೂ ಹೆಚ್ಚು ಪೊಲೀಸರು ಪೂಜೆಯಲ್ಲಿ ಭಾಗಿ

Police Hold Pooja for Rain Tumakuru

ತುಮಕೂರು (ಜೂ.07): ಮಳೆಗಾಗಿ ಪೊಲೀಸರೇ ದೇವರ ಮೊರೆ ಹೋದ ಘಟನೆ ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನಡೆದಿದೆ.

ಮಳೆಗಾಗಿ ಪೊಲೀಸರು ಸೇರಿ ಶನಿ ಮಹಾತ್ಮಾ ದೇವರಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ಒಂದು ತಿಂಗಳ ಹಿಂದೆ ಪಾವಗಡ ಪಟ್ಟಣ, ತಿರುಮಣಿ, ವೈ ಎನ್ ಹೊಸಕೋಟೆ ಹಾಗೂ ಅರಸಿಕೆರೆ ಸೇರಿ ನಾಲ್ಕೂ ಠಾಣೆಯ ಪೊಲೀಸರು ಪಟ್ಟಣದ ಶನಿಮಹಾತ್ಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದ್ದಾರೆ. ಸಿಪಿಐ ಆನಂದ್ ಮತ್ತು ಶ್ರೀ ಶೈಲ ಸೇರಿದಂತೆ ನೂರಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದಾರೆ.

ಪಾವಗಡ ತಾಲೂಕಿನಲ್ಲಿ ಮಳೆಯಿಲ್ಲದೆ ನೀರಿನ ಸಮಸ್ಯೆ ತಲೆದೋರಿತ್ತು, ನೀರಿಲ್ಲದೆ ಬೆಳೆಗಳು ಒಣಗಿಹೋಗಿತ್ತು ಅಲ್ಲದೆ ಬಿಸಿಲ ತಾಪದಿಂದ ಜನರು ತತ್ತರಿಸಿ ಹೋಗಿದ್ದಾರೆ. ಈ ಹಿನ್ನಲೆಯಲ್ಲಿ ಪೊಲೀಸರು ವೈಯಕ್ತಿಕವಾಗಿ ವಂತಿಗೆ ಸಂಗ್ರಹಿಸಿ ವರುಣನ ಕೃಪೆಗಾಗಿ ದೇವರ ಮೊರೆಹೊಗಿದ್ದಾರೆ.

Follow Us:
Download App:
  • android
  • ios