ಸಿಡಿಲಿಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದಲ್ಲಿ ಅನಾಹುತ
. ಕಳೆದ 1 ವಾರದಿಂದ ಕುಕ್ಕೆಯಲ್ಲಿ ಭಾರೀ ಮಳೆಯ ಆರ್ಭಟ ದಿಂದ ಸಿಡಿಲಿನ ಅಬ್ಬರವೂ ಹೆಚ್ಚಾಗಿದೆ.
ದಕ್ಷಿಣ ಕನ್ನಡ(ಮೇ.22): ಪ್ರಸಿದ್ಧ ಯಾತ್ರಾಸ್ಥಳ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅನಾಹುತ ಸಂಭವಿಸಿದೆ. ಸಿಡಿಲಿನ ರಬಸಕ್ಕೆ ದೇವಾಲಯದ ಗೋಪುರದ ತುದಿ ಕಿತ್ತು ಹೋಗಿದೆ. ಕಳೆದ 1 ವಾರದಿಂದ ಕುಕ್ಕೆಯಲ್ಲಿ ಭಾರೀ ಮಳೆಯ ಆರ್ಭಟ ದಿಂದ ಸಿಡಿಲಿನ ಅಬ್ಬರವೂ ಹೆಚ್ಚಾಗಿದೆ. ಕಳೆದ ಭಾನುವಾರ ಸಿಡಿಲ ಅಬ್ಬರಕ್ಕೆ ಗೋಪುರದ ತುದಿ ಭಾಗ ಕಿತ್ತು ಹೋಗಿದ್ದು, ಭಕ್ತರಲ್ಲಿ ಆತಂಕ ಸೃಷ್ಟಿಸಿದೆ. ಇನ್ನು 2 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಡಿಲಿನ ಆರ್ಭಟವೂ ಮಿತಿ ಮೀರುತ್ತಿದೆ.