ಜಯಲಲಿತಾ ಶೀಘ್ರದಲ್ಲಿಯೇ ಮನೆಗೆ
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರಿಗೆ ಪ್ರಜ್ಞೆ ಬಂದಿದ್ದು ಎದ್ದು ಕುಳಿತುಕೊಳ್ಳಲು ಶಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈ (ಅ.21): ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾರವರಿಗೆ ಪ್ರಜ್ಞೆ ಬಂದಿದ್ದು ಎದ್ದು ಕುಳಿತುಕೊಳ್ಳಲು ಶಕ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಳೆದ 3 ವಾರಗಳಿಂದ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವು ದಿನಗಳ ತನಕ ಚಿಕಿತ್ಸೆ ಅಗತ್ಯವಿದ್ದು ಉಸಿರಾಟದ ಕೊಳವೆ ತೆಗೆದ ಬಳಿಕ ಮಾತನಾಡಲು ಶಕ್ತರಾಗುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಜಯಲಲಿತಾ ಚೇತರಿಸಿಕೊಳ್ಳುತ್ತಿದ್ದು ಶೀಘ್ರವೇ ಮನೆಗೆ ಹಿಂತಿರುಗಲಿದ್ದಾರೆ ಎಂದು ಎಐಡಿಎಂಕೆ ತಿಳಿಸಿದೆ.