Asianet Suvarna News Asianet Suvarna News

ಶಿವಮೊಗ್ಗ: ಮಠದಲ್ಲಿನ ಮರ್ಡರ್ ಕೇಸ್'ಗೆ ಟ್ವಿಸ್ಟ್; ಅನೈತಿಕ ಸಂಬಂಧ, ಸೆಕ್ಸ್ ದಾಹಕ್ಕಾಗಿ ನಡೆಯಿತಾ ಕೊಲೆ?

ಆರೋಪಿ ರುದ್ರೇಶ್'ನ ಸೆಕ್ಸ್ ಬೇಡಿಕೆಗೆ ಚೈತ್ರಾ ಒಪ್ಪೋದಿಲ್ಲ. ಇದರಿಂದ ಸಿಟ್ಟಿಗೆದ್ದ ರುದ್ರೇಶ್, ಚೈತ್ರಾ ಮತ್ತವಳ ಕುಟುಂಬ 7 ಸದಸ್ಯರೆಲ್ಲರಿಗೂ ಸಾಂಬಾರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ತಿನಿಸುತ್ತಾನೆ. ನಿದ್ರೆ ಹೋದ ಚೈತ್ರಾಳೊಂದಿಗೆ ಸಂಭೋಗಕ್ಕೆ ವಿಫಲಪ್ರಯತ್ನ ನಡೆಸುತ್ತಾನೆ. ಚೈತ್ರಾಳೊಂದಿಗೆ ಸೆಕ್ಸ್ ಮಾಡಲು ಸಾಧ್ಯವಾಗದಾಗ ಇನ್ನಷ್ಟು ವ್ಯಗ್ರನಾದ ರುದ್ರೇಶ್, 3 ವರ್ಷದ ಸೃಜನ್'ನನ್ನು ಮಠದ ಪಕ್ಕದ ಕೊಳದಲ್ಲಿ ಮುಳುಗಿಸಿ ಸಾಯಿಸುತ್ತಾನೆನ್ನಲಾಗಿದೆ.

immoral relationship behind moolegadde mutt murder case

ಶಿವಮೊಗ್ಗ(ಏ. 12): ಹೊಸನಗರದ ಮೂಲೆಗದ್ದೆ ಮಠದ ಆವರಣದಲ್ಲಿ ಸಂಭವಿಸಿದ 3 ವರ್ಷದ ಮಗುವಿನ ಕೊಲೆ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಆರೋಪಿ ರುದ್ರೇಶ್ ಹಾಗೂ ಮಗುವಿನ ತಾಯಿ ಚೈತ್ರಾ ನಡುವೆ ಇದ್ದ ಅನೈತಿಕ ಸಂಬಂಧವು ಈ ಕೊಲೆಗೆ ಕಾರಣವಾಗಿದೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಸೆಕ್ಸ್'ಗೆ ನಿರಾಕರಿಸಿದಳೆಂದು ಸಿಟ್ಟಿಗೆ ಚೈತ್ರಾಳ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮಗುವನ್ನು ರುದ್ರೇಶ್ ಬಲಿಕೊಟ್ಟಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದುಬಂದಿದೆ. ಶಿವಮೊಗ್ಗದ ಎಸ್ಪಿ ಅಭಿನವ್ ಖರೆ ಈ ವಿಷಯವನ್ನ ಮಾಧ್ಯಮಗಳಿಗೆ ಹೊರಗೆಡವಿದ್ದಾರೆ.

ರುದ್ರೇಶ್ ಮತ್ತು ಚೈತ್ರಾ ನಡುವೆ ಎರಡು ವರ್ಷಗಳಿಂದ ಅನೈತಿಕ ಸಂಬಂಧವಿತ್ತು. ಪದೇ ಪದೇ ಆಕೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸುತ್ತಿರುತ್ತಾನೆ. ಆದರೆ, 3 ದಿನಗಳಿಂದ ತನ್ನೊಂದಿಗೆ ಸೆಕ್ಸ್ ಮಾಡಬೇಕೆಂದು ಚೈತ್ರಾಗೆ ಒತ್ತಡ ಹೇರುತ್ತಿರುತ್ತಾನೆ. ಮೂಲೆಗದ್ದೆ ಮಠದ ನೂತನ ಸ್ವಾಮೀಜಿಯಾಗಿ ಶಾಂತಕುಮಾರ ದೇಶಿಕೇಂದ್ರ ಸ್ವಾಮೀಜಿಯ ಪಟ್ಟಾಭಿಷೇಕ ಕಾರ್ಯಕ್ರಮದ ಸಿದ್ಧತೆ ನಡೆಯುತ್ತಿರುತ್ತದೆ. ಹಿಂದಿನ ಸ್ವಾಮೀಜಿ ಸಿದ್ದಲಿಂಗ ಸ್ವಾಮಿಗಳ ತಂಗಿಯ ಮಗಳಾದ ಚೈತ್ರಾಗೆ ಈ ಕಾರ್ಯಕ್ರಮದಲ್ಲಿ ಹಲವು ಜವಾಬ್ದಾರಿಗಳು ಬಿದ್ದಿರುತ್ತವೆ. ಹೀಗಾಗಿ, ಆರೋಪಿ ರುದ್ರೇಶ್'ನ ಸೆಕ್ಸ್ ಬೇಡಿಕೆಗೆ ಚೈತ್ರಾ ಒಪ್ಪೋದಿಲ್ಲ. ಇದರಿಂದ ಸಿಟ್ಟಿಗೆದ್ದ ರುದ್ರೇಶ್, ಚೈತ್ರಾ ಮತ್ತವಳ ಕುಟುಂಬ 7 ಸದಸ್ಯರೆಲ್ಲರಿಗೂ ಸಾಂಬಾರಿನಲ್ಲಿ ನಿದ್ರೆ ಮಾತ್ರೆ ಬೆರೆಸಿ ತಿನಿಸುತ್ತಾನೆ. ನಿದ್ರೆ ಹೋದ ಚೈತ್ರಾಳೊಂದಿಗೆ ಸಂಭೋಗಕ್ಕೆ ವಿಫಲಪ್ರಯತ್ನ ನಡೆಸುತ್ತಾನೆ. ಚೈತ್ರಾಳೊಂದಿಗೆ ಸೆಕ್ಸ್ ಮಾಡಲು ಸಾಧ್ಯವಾಗದಾಗ ಇನ್ನಷ್ಟು ವ್ಯಗ್ರನಾದ ರುದ್ರೇಶ್, 3 ವರ್ಷದ ಸೃಜನ್'ನನ್ನು ಮಠದ ಪಕ್ಕದ ಕೊಳದಲ್ಲಿ ಮುಳುಗಿಸಿ ಸಾಯಿಸುತ್ತಾನೆನ್ನಲಾಗಿದೆ.

ವರದಿ: ರಾಜೇಶ್ ಕಾಮತ್, ಶಿವಮೊಗ್ಗ

Follow Us:
Download App:
  • android
  • ios