Asianet Suvarna News Asianet Suvarna News

ಚಿಕ್ಕಮಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; 6 ಮಂದಿಗೆ ಗಾಯ

ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯವಾಗಿದೆ. ರಾಜು, ರತ್ನ, ಮಮತ, ಪ್ರದೀಪ್ , ಶ್ರೀನಿವಾಸ್ , ಕಿರಣ್ , ಸಂಜು ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಯೆ ನೀಡಲಾಗುತ್ತಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ವಿಚಾರಣೆ ಆರಂಭಿಸಿದ್ದಾರೆ.

group clash in chikmagaluru kalludoddi

ಚಿಕ್ಕಮಗಳೂರು: ಕ್ಷುಲಕ ಕಾರಣಕ್ಕೆ  2 ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಲ್ಲುದೊಡ್ಡಿ ಬಡಾವಣೆಯಲ್ಲಿ ನಡೆದಿದೆ. ಪೋನ್ ವಿಚಾರಕ್ಕೆ ಸಂಬಂಧಿಸಿದಂತೆ ಬಡಾವಣೆಯ 2 ಗುಂಪುಗಳ ನಡೆವೆ ತಡರಾತ್ರಿ ಗಲಾಟೆ ಆರಂಭವಾಗಿದೆ. ಮಾತಿನ ಚಕಮಕಿ ನಡೆದು ನಂತರ ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಘಟನೆಯಲ್ಲಿ 6 ಮಂದಿಗೆ ಗಂಭೀರ ಗಾಯವಾಗಿದೆ. ರಾಜು, ರತ್ನ, ಮಮತ, ಪ್ರದೀಪ್ , ಶ್ರೀನಿವಾಸ್ , ಕಿರಣ್ , ಸಂಜು ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಯೆ ನೀಡಲಾಗುತ್ತಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ರು ವಿಚಾರಣೆ ಆರಂಭಿಸಿದ್ದಾರೆ.

ವರದಿ: ಕಿರಣ್ ಕೆ., ಸುವರ್ಣನ್ಯೂಸ್, ಚಿಕ್ಕಮಗಳೂರು

Follow Us:
Download App:
  • android
  • ios