ಪ್ರಿಯಕರನ ಕ್ರೌರ್ಯಕ್ಕೆ ಬಲಿಯಾಯಿತು ಜೀವ: ಪ್ರಿಯತಮೆಯ ಕತ್ತು ಕೊಯ್ದು, ಬೆಂಕಿ ಹಚ್ಚಿದ!
ಪ್ರಿಯತಮನಿಂದ ಇರಿತಕ್ಕೊಳಗಾಗಿ ಬಳಿಕ ಆತ ಹಚ್ಚಿದ್ದ ಬೆಂಕಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೊಪ್ಪಳದ ಯುವತಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
ಕೊಪ್ಪಳ(ಮಾ.26): ಪ್ರಿಯತಮನಿಂದ ಇರಿತಕ್ಕೊಳಗಾಗಿ ಬಳಿಕ ಆತ ಹಚ್ಚಿದ್ದ ಬೆಂಕಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೊಪ್ಪಳದ ಯುವತಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ್ ಗ್ರಾಮದ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿದ್ದ ಶಹನಾಜ್ ಬೇಗಂ ಸಾವಿಗೀಡಾದ ಯುವತಿ. ಈಕೆ ಕಳೆದ ಎರಡು ವರ್ಷಗಳಿಂದ ಅಮರೇಗೌಡ ಎನ್ನುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು, ಜೊತೆಗೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರು.ಇತ್ತೀಚಿಗೆ ಅಮಮರೇಗೌಡ, ಶಹನಾಜ್ಬೇಗಂಳನ್ನು ಮದುವೆ ಆಗುವುದಾಗಿ ಹೇಳಿದ್ದ. ಇದಕ್ಕೆ ಶಹನಾಜ್ ಬೇಗಂ ವಿರೋಧ ವ್ಯಕ್ತಪಡಿಸಿದ್ದಳು. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಶಹನಾಜ್ಬೇಗಂ ಹಾಗೂ ಆಕೆಯ ತಾಯಿ ಅಮಲಾಬಿಯನ್ನು ಕುಷ್ಟಗಿ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಕತ್ತು ಕೊಯ್ದು, ಇಬ್ಬರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಬಳಿಕ ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಗಿತ್ತು.
ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಹನಾಜ್ ಬೇಗಂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಅಮರೇಗೌಡನೂ ಸಹ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದ. ಸದ್ಯ ಅಮರೇಗೌಡ, ಶರೀರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.