Asianet Suvarna News Asianet Suvarna News

ಪ್ರಿಯಕರನ ಕ್ರೌರ್ಯಕ್ಕೆ ಬಲಿಯಾಯಿತು ಜೀವ: ಪ್ರಿಯತಮೆಯ ಕತ್ತು ಕೊಯ್ದು, ಬೆಂಕಿ ಹಚ್ಚಿದ!

ಪ್ರಿಯತಮನಿಂದ ಇರಿತಕ್ಕೊಳಗಾಗಿ ಬಳಿಕ ಆತ ಹಚ್ಚಿದ್ದ ಬೆಂಕಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೊಪ್ಪಳದ ಯುವತಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.  

Girl Killed By Her Qwn Lover

ಕೊಪ್ಪಳ(ಮಾ.26): ಪ್ರಿಯತಮನಿಂದ ಇರಿತಕ್ಕೊಳಗಾಗಿ ಬಳಿಕ ಆತ ಹಚ್ಚಿದ್ದ ಬೆಂಕಿಯಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕೊಪ್ಪಳದ ಯುವತಿ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.  

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮುದೇನೂರ್​ ಗ್ರಾಮದ ಸರಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಆಗಿದ್ದ ಶಹನಾಜ್ ಬೇಗಂ ಸಾವಿಗೀಡಾದ ಯುವತಿ. ಈಕೆ ಕಳೆದ ಎರಡು ವರ್ಷಗಳಿಂದ ಅಮರೇಗೌಡ ಎನ್ನುವ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಳು, ಜೊತೆಗೆ ಇವರಿಬ್ಬರು ಒಂದೇ ಮನೆಯಲ್ಲಿ ವಾಸವಾಗಿದ್ದರು.ಇತ್ತೀಚಿಗೆ ಅಮಮರೇಗೌಡ, ಶಹನಾಜ್​ಬೇಗಂಳನ್ನು ಮದುವೆ ಆಗುವುದಾಗಿ ಹೇಳಿದ್ದ. ಇದಕ್ಕೆ ಶಹನಾಜ್​ ಬೇಗಂ ವಿರೋಧ ವ್ಯಕ್ತಪಡಿಸಿದ್ದಳು. ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಶಹನಾಜ್​ಬೇಗಂ ಹಾಗೂ ಆಕೆಯ ತಾಯಿ ಅಮಲಾಬಿಯನ್ನು ಕುಷ್ಟಗಿ ಪಟ್ಟಣದ ಹೊರವಲಯದ ಜಮೀನೊಂದರಲ್ಲಿ ಕತ್ತು ಕೊಯ್ದು, ಇಬ್ಬರಿಗೂ ಪೆಟ್ರೋಲ್​​ ಸುರಿದು ಬೆಂಕಿ ಹಚ್ಚಿದ್ದ. ಬಳಿಕ ಇವರಿಬ್ಬರನ್ನು ಹೆಚ್ಚಿನ ಚಿಕಿತ್ಸೆಗೆಂದು ಬಾಗಲಕೋಟೆ ಆಸ್ಪತ್ರೆಗೆ ರವಾನಿಸಲಾಗಿತ್ತು.

ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಶಹನಾಜ್​ ಬೇಗಂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಘಟನೆ ಬಳಿಕ ಅಮರೇಗೌಡನೂ ಸಹ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದ. ಸದ್ಯ ಅಮರೇಗೌಡ, ಶರೀರಾಮನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

 

Follow Us:
Download App:
  • android
  • ios