ಗೌರಿಶಂಕರ ಸ್ವಾಮೀಜಿ ವಿಧಿವಶ: ಸಾವಿನ ಹಿಂದೆ ಸಂಚು ನಡೆದಿರುವ ಶಂಕೆ
ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರತ್ವಕ್ಕಾಗಿ ಹೋರಾಟ ನಡೆಸ್ತಾ ಇದ್ದ ಗೌರಿಶಂಕರ ಸ್ವಾಮಿಜಿ ವಿಧಿವಶರಾಗಿದ್ದಾರೆ. 71 ವರ್ಷದ ಸ್ವಾಮಿಜಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ತುಮಕೂರು(ಜ.11): ತುಮಕೂರು ಸಿದ್ದಗಂಗಾ ಮಠದ ಉತ್ತರಾಧಿಕಾರತ್ವಕ್ಕಾಗಿ ಹೋರಾಟ ನಡೆಸ್ತಾ ಇದ್ದ ಗೌರಿಶಂಕರ ಸ್ವಾಮಿಜಿ ವಿಧಿವಶರಾಗಿದ್ದಾರೆ. 71 ವರ್ಷದ ಸ್ವಾಮಿಜಿ ನಿನ್ನೆ ತಡರಾತ್ರಿ 2 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಗೌರಿಶಂಕರ ಸ್ವಾಮಿಜಿ ನಿಧನದ ಹಿಂದೆ ಸಂಚು ಇದೆ ಎಂದು ಭಕ್ತರು ಸಂಶಯ ವ್ಯಕ್ತಪಡಿಸಿದ್ದಾರೆ. ಸಿದ್ದಗಂಗಾ ಮಠದಿಂದ ಪ್ರಭಾವ ಬೀರಿ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.