ಉಪ-ರಾಷ್ಟ್ರಪತಿ ಹುದ್ದೆಗೆ ಎಸ್.ಎಂ.ಕೃಷ್ಣ ಹೆಸರು ಮಹಾಪ್ರಮಾದ: ಬಿಜೆಪಿ ವಕ್ತಾರ
ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಸ್.ಎಂ.ಕೃಷ್ಣ ಅವರನ್ನು ಉಪ-ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮಹಾ ಪ್ರಮಾದವನ್ನು ಬಿಜೆಪಿ ನಾಯಕರು ಮಾಡುವುದಿಲ್ಲವೆಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಶರಾಘವಾಚಾರ್ ಹೇಳಿದ್ದಾರೆ.
ಬೆಂಗಳೂರು: ಇತ್ತೀಚೆಗೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಸ್.ಎಂ.ಕೃಷ್ಣ ಅವರನ್ನು ಉಪ-ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮಹಾ ಪ್ರಮಾದವನ್ನು ಬಿಜೆಪಿ ನಾಯಕರು ಮಾಡುವುದಿಲ್ಲವೆಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಶರಾಘವಾಚಾರ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಎಸ್.ಎಂ.ಕೃಷ್ಣ ಬಗ್ಗೆ ಹಾಕಿರುವ ಪೋಸ್ಟ್’ವೊಂದರ ಚರ್ಚೆಯಲ್ಲಿ ಭಾಗವಹಿಸಿದ ಶೇಶರಾಘವಾಚಾರ್, ರಾಷ್ಟ್ರಪತಿ/ ಉಪರಾಷ್ಟ್ರಪತಿ ಹುದ್ದೆಯ ಸ್ಪರ್ಧೆಯಲ್ಲಿ ಕೃಷ್ಣ ಅವರ ಹೆಸರು ಇರಲಿಲ್ಲ, ಅಂತಹ ಮಹಾಪ್ರಮಾದವನ್ನು ಪಕ್ಷದ ಮುಖಂಡರು ಮಾಡುವುದಿಲ್ಲವೆಂದು ಹೇಳಿದ್ದಾರೆ.