ಮೇವು ಕೊರತೆ: ಗೋಶಾಲೆಯ ಮೇವನ್ನೇ ಹೊತ್ತೊಯ್ದ ರೈತರು!
ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗೆ ಮೇವಿನ ಲಾರಿಗಳು ಬಂದ ತಕ್ಷಣ ರೈತರು ಮುಗಿಬಿದ್ದು ತಳ್ಳಾಟ, ನೂಕಾಟ ನಡೆಸಿ ಮೇವು ಹೊತ್ತೊಯ್ದ ಘಟನೆ ನಡೆದಿದೆ.
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ತುರುವನೂರು ಗ್ರಾಮದಲ್ಲಿ ಜಿಲ್ಲಾಡಳಿತ ತೆರೆದಿರುವ ಗೋಶಾಲೆಗೆ ಮೇವಿನ ಲಾರಿಗಳು ಬಂದ ತಕ್ಷಣ ರೈತರು ಮುಗಿಬಿದ್ದು ತಳ್ಳಾಟ, ನೂಕಾಟ ನಡೆಸಿ ಮೇವು ಹೊತ್ತೊಯ್ದ ಘಟನೆ ನಡೆದಿದೆ.
ರುರುವನೂರಿನ ಗಗೋಶಾಲೆಯಲ್ಲಿ 9400 ರಾಸುಗಳಿದ್ದು ನಿತ್ಯ ಸುಮಾರು 50 ಟನ್ ಮೇವು ಬೇಕಾಗಿದೆ. ಈ ಗೋಶಾಲೆ ಚಿತ್ರದುರ್ಗ ತಾಲೂಕಿನ ವ್ಯಾಪ್ತಿಗಷ್ಟೇ ನಿಗದಿಯಾಗಿದ್ದರೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ದಾವಣಗೆರೆ ಜಿಲ್ಲೆಯ ಜಗಳೂರು ತಾಲುಕಿನಿಂದ ಜಾನುವಾರುಗಳ ತಂದು ಗೋಶಾಲೆಗೆ ಬಿಡಲಾಗಿದೆ. ಹೀಗಾಗಿ ಮೇವು ಸಾಕಾಗದು ಎಂದು ರೈತರು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.
(ಸಾಂದರ್ಭಿಕ ಚಿತ್ರ)