ಈಶ್ವರಪ್ಪರಿಂದ ರಾಜಕೀಯ ಆತ್ಮಹತ್ಯೆ: ಆಯನೂರು ಮಂಜುನಾಥ್
ಈಶ್ವರಪ್ಪ ಅವರದು ಆತ್ಮಹತ್ಯೆ ರಾಜಕಾರಣ ಎಂದು ಬಣ್ಣಿಸಿರುವ ಆಯನೂರು, ಯಡಿಯೂರಪ್ಪ ಸಿಎಂ ಆಗಬಾರದು ಎಂದು ಬಯಸುವವರು ಈಶ್ವರಪ್ಪ ಹೆಗಲ ಮೇಲೆ ಬಂದೂಕಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಶಿವಮೊಗ್ಗ (ಜ.16): ಈಶ್ವರಪ್ಪ ಹೋರಾಟ ಯಡಿಯೂರಪ್ಪ ವಿರುದ್ಧ ಮಾತ್ರ, ಆದರೆ ಅವರ ಹೋರಾಟ ಹೋರಾಟ ಹಿಂದುಳಿದ ವರ್ಗದವರ ಪರ ಅಲ್ಲ, ಎಂದು ಬಿಜೆಪಿ ನಾಯಕ ಆಯನೂರು ಮಂಜುನಾಥ್ ವಾಗ್ದಾಳಿ ನಡೆಸಿದ್ದಾರೆ.
ಈಶ್ವರಪ್ಪ ಅವರದು ಆತ್ಮಹತ್ಯೆ ರಾಜಕಾರಣ ಎಂದು ಬಣ್ಣಿಸಿರುವ ಆಯನೂರು, ಯಡಿಯೂರಪ್ಪ ಸಿಎಂ ಆಗಬಾರದು ಎಂದು ಬಯಸುವವರು ಈಶ್ವರಪ್ಪ ಹೆಗಲ ಮೇಲೆ ಬಂದೂಕಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬಿಜೆಪಿಯ ಇತರ ನಾಯಕರಾದ ಆರ್.ಅಶೋಕ್, ಅನಂತಕುಮಾರ್, ಸದಾನಂದಗೌಡ ಹಾಗೂ ಜಗದೀಶ್ ಶೆಟ್ಟರ್ ವಿರುದ್ಧವೂ ಷಡ್ಯಂತ್ರ ನಡೆದಯುತ್ತಿದೆ, ಎಂದು ಈ ಸಂದರ್ಭದಲ್ಲಿ ಆಯನೂರು ಹೇಳಿದ್ದಾರೆ.