ಕುಡಿದ ಅಮಲಿನಲ್ಲಿ ಮನೆಗೇ ಕಾರು ಗುದ್ದಿದ ಡ್ರೈವರ್
ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಮನೆಗೆ ಗುದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತನಗರದ ಟಿ.ಪಿ.ಕೈಲಾಸಂ 6ನೇ ಕ್ರಾಸ್ ನಲ್ಲಿ ರಾತ್ರಿ ಯುವಕರ ಗುಂಪೊಂದು ಕುಡಿದು ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದಾರೆ. ಮೊದಲೇ ಕುಡಿದಿದ್ದರಿಂದ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್ ಮೊದಲು ಮರಕ್ಕೆ ಗುದ್ದಿದ್ದಾನೆ. ಬಳಿಕ ಕಾರು ಗುರು ರಾವ್ ಎಂಬುವರ ಮನೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡ್ರೈವರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಪ್ರಾಣಪಾಯದಿಂದ ಪರಾಗಿದ್ದಾನೆ. ಘಟನೆ ಬಳಿಕ ಕಾರ್ ಬಿಟ್ಟು ಡ್ರೈವರ್ ಪರಾರಿಯಾಗಿದ್ದಾನೆ. ಕುಡಿದು ಅತೀ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಂಗಳೂರು(ಅ.27): ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಕಾರ್ ಚಲಾಯಿಸಿ ಮನೆಗೆ ಗುದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹನುಮಂತನಗರದ ಟಿ.ಪಿ.ಕೈಲಾಸಂ 6ನೇ ಕ್ರಾಸ್ ನಲ್ಲಿ ರಾತ್ರಿ ಯುವಕರ ಗುಂಪೊಂದು ಕುಡಿದು ಸ್ಕಾರ್ಪಿಯೋ ಕಾರಿನಲ್ಲಿ ಬಂದಿದ್ದಾರೆ.
ಮೊದಲೇ ಕುಡಿದಿದ್ದರಿಂದ ಕಾರಿನ ನಿಯಂತ್ರಣ ಕಳೆದುಕೊಂಡ ಡ್ರೈವರ್ ಮೊದಲು ಮರಕ್ಕೆ ಗುದ್ದಿದ್ದಾನೆ. ಬಳಿಕ ಕಾರು ಗುರು ರಾವ್ ಎಂಬುವರ ಮನೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಡ್ರೈವರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು,ಪ್ರಾಣಪಾಯದಿಂದ ಪರಾಗಿದ್ದಾನೆ. ಘಟನೆ ಬಳಿಕ ಕಾರ್ ಬಿಟ್ಟು ಡ್ರೈವರ್ ಪರಾರಿಯಾಗಿದ್ದಾನೆ. ಕುಡಿದು ಅತೀ ವೇಗವಾಗಿ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಬಸವಗುಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯ ಬಸವನಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಕಾರಿನಲ್ಲಿದ್ದ ಯುವಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.