Asianet Suvarna News Asianet Suvarna News

ಆರ್. ಅಶೋಕ್ ಒತ್ತಡದಿಂದ ಬಿಜೆಪಿಯಿಂದ ಅಮಾನತ್ತಾದರಾ ವೆಂಕಟೇಶ್ ಮೂರ್ತಿ?

ಮಾಜಿ ಮೇಯರ್​ ವೆಂಕಟೇಶ ಮೂರ್ತಿ, ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಗೇಡ್ ಸಭೆ ನಡೆಸದಂತೆ ಆರ್. ಅಶೋಕ್ ತಾಕೀತು ಮಾಡಿದ್ದರು. ಹೀಗಿದ್ದರೂ ಆರ್. ಅಶೋಕ್ ಮಾತಿಗೆ ಕ್ಯಾರೆ ಎನ್ನದೇ ವೆಂಕಟೇಶ್ ಮೂರ್ತಿ ಸಭೆ ನಡೆಸಲು ಮುಂದಾಗಿದ್ದರು. ಇವರ ಈ ನಿಲುವಿನಿಂದ ಸಿಟ್ಟಿಗೆದ್ದ ಅಶೋಕ್​ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

Doubt Is Raising Against R Ashok Regarding The Dismiss Of Venkatesh Moorthy

ಬೆಂಗಳೂರು(ಜ.11): ಮಾಜಿ ಮೇಯರ್​ಗೆ ಗೇಟ್'​ಪಾಸ್​ ಕೊಡಲು ಆರ್. ಅಶೋಕ್ ಕಾರಣನಾ? ಹೀಗೊಂದು ಅನುಮಾನ ಇದೀಗ ಕಾಡಲಾರಂಭಿಸಿದೆ. ಆರ್. ಅಶೋಕ್​ ಒತ್ತಡದಿಂದಲೇ ಬಿಜೆಪಿಯಿಂದ ವೆಂಕಟೇಶ್​ ಮೂರ್ತಿ ಅಮಾನತ್ತಾದರಾ?

ಮಾಜಿ ಮೇಯರ್​ ವೆಂಕಟೇಶ ಮೂರ್ತಿ, ರಾಯಣ್ಣ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಬ್ರಿಗೇಡ್ ಸಭೆ ನಡೆಸದಂತೆ ಆರ್. ಅಶೋಕ್ ತಾಕೀತು ಮಾಡಿದ್ದರು. ಹೀಗಿದ್ದರೂ ಆರ್. ಅಶೋಕ್ ಮಾತಿಗೆ ಕ್ಯಾರೆ ಎನ್ನದೇ ವೆಂಕಟೇಶ್ ಮೂರ್ತಿ ಸಭೆ ನಡೆಸಲು ಮುಂದಾಗಿದ್ದರು. ಇವರ ಈ ನಿಲುವಿನಿಂದ ಸಿಟ್ಟಿಗೆದ್ದ ಅಶೋಕ್​ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿಂದೆ ಯಡಿಯೂರಪ್ಪ ಸಿಎಂ ಆಗಲು ಬ್ರಿಗೇಡ್ ಬೆಂಬಲ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಇವರ ಈ ಮಾತಿಗೆ ತಿರುಗೇಟು ನೀಡಲು ವೆಂಕಟೇಶಮೂರ್ತಿಯನ್ನು ಬಿಜೆಪಿಯಿಂದ ಅಮಾನತುಗೊಳಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

Follow Us:
Download App:
  • android
  • ios