ಭೂವ್ಯಾಜ್ಯ: ದಿಲ್ಲಿ ತಲುಪಿದ ಹಳ್ಳಿ ಮಹಿಳೆಗೆ ಹಿಂತಿರುಗಲು ಹಣ ನೀಡಿದ ಸಿಎಂ
ಮಹಿಳೆಯ ಅಹವಾಲನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸ್ಪಂದಿಸಿ ಆದ್ಯತೆಯ ಮೇಲೆ ಸಮಸ್ಯೆ ಬಗೆ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನವದೆಹಲಿ: ಬಗೆಹರಿಯದ ತನ್ನ ಭೂ ವ್ಯಾಜ್ಯ ಸಮಸ್ಯೆಯನ್ನು ಹೇಳಿಕೊಳ್ಳಲು ಮಹಿಳೆಯೊಬ್ಬಳು ದೆಹಲಿಗೆ ತಲುಪಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾದ ಘಟನೆ ನಡೆದಿದೆ.
ಮಹಿಳೆಯ ಅಹವಾಲನ್ನು ಆಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ಸ್ಪಂದಿಸಿ ಆದ್ಯತೆಯ ಮೇಲೆ ಸಮಸ್ಯೆ ಬಗೆ ಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮುನಿಯಮ್ಮ ಅವರಿಗೆ ಉಪಹಾರ ಒದಗಿಸಿ ಕರ್ನಾಟಕಭವನದಲ್ಲಿ ತಂಗಲು ಅವಕಾಶ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಮುಖ್ಯಮಂತ್ರಿಗಳು ಊರಿಗೆ ಹಿಂದಿರುಗಲು ಹಣವನ್ನು ನೀಡಿದರು.