ಮಾಸ್ತಿಗುಡಿ ದುರಂತ ಪ್ರಕರಣ : 6 ಮಂದಿ ವಿರುದ್ಧ ಚಾರ್ಜ್'ಶೀಟ್ ಸಲ್ಲಿಕೆ
ಮಾಗಡಿ 1ನೇ ಜೆಎಂ'ಎಫ್'ಸಿ ನ್ಯಾಯಾಲಯದಲ್ಲಿ ಚಾರ್ಜ್'ಶೀಟ್ ಸಲ್ಲಿಸಲಾಗಿದೆ.
ರಾಮನಗರ(ಏ.27): ಮಾಸ್ತಿಗುಡಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮನಗರ ಡಿಸಿಬಿ ಪೊಲೀಸರು ಮಾಸ್ತಿ'ಗುಡಿ ಚಿತ್ರತಂಡದ 6 ಮಂದಿಯ ವಿರುದ್ಧ ಚಾರ್ಜ್'ಶೀಟ್ ಸಲ್ಲಿಸಿದ್ದಾರೆ. ನಿರ್ಮಾಪಕ ಸುಂದರ್ ಪಿ ಗೌಡ, ನಿರ್ದೇಶಕ ನಾಗಶೇಖರ್, ಸಹ ನಿರ್ದೇಶಕ ಸಿದ್ಧಾರ್ಥ್, ಸಾಹಸ ನಿರ್ದೇಶಕ ರವಿವರ್ಮ, ಯೂನಿಟ್ ಮ್ಯಾನೇಜರ್ ಭರತ್ ಹಾಗೂ ಹೆಲಿಕಾಪ್ಟರ್ ಚಾಲಕ ಪ್ರಕಾಶ್ ಬಿರಾದಾರ್ ಮೇಲೆ ಮಾಗಡಿ 1ನೇ ಜೆಎಂ'ಎಫ್'ಸಿ ನ್ಯಾಯಾಲಯದಲ್ಲಿ ಚಾರ್ಜ್'ಶೀಟ್ ಸಲ್ಲಿಸಲಾಗಿದೆ.