ಭಾನುವಾರದ ಪೆಟ್ರೋಲ್ ಬಂಕ್ ರಜೆಗೆ ಕೇಂದ್ರದ ತಡೆ
ಈ ರೀತಿ ಬಂಕ್ ಬಂದ್ ಮಾಡಕೂಡದು ಎಂದು ಕೇಂದ್ರ ಸರ್ಕಾರ ತಾಕೀತು ಮಾಡಿದೆ ಹಾಗೂ ಇಂಥ ಕ್ರಮಗಳು ಜನರಿಗೆ ಅನಾನುಕೂಲ ತರುತ್ತವೆ ಎಂದು ಹೇಳಿದೆ.
ನವದೆಹಲಿ: ‘ಪ್ರಧಾನಿ ಮೋದಿ ಅವರು ತೈಲ ಮಿತವ್ಯವಕ್ಕೆ ಕರೆ ನೀಡಿದ್ದಾರೆ' ಎಂಬ ಕಾರಣ ಹೇಳಿ ಮೇ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಬಂಕ್ಗೆ ರಜೆ ಸಾರುವುದಾಗಿ ಹೇಳಿದ್ದ ಕೆಲವು ಪೆಟ್ರೋಲಿಯಂ ಡೀಲರ್ಗಳ ಸಂಘಗಳನ್ನು ಖುದ್ದು ಕೇಂದ್ರ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ.
ಜೊತೆಗೆ ಈ ರೀತಿ ಬಂಕ್ ಬಂದ್ ಮಾಡಕೂಡದು ಎಂದು ತಾಕೀತು ಮಾಡಿದೆ. ಇಂಥ ಕ್ರಮಗಳು ಜನರಿಗೆ ಅನಾನುಕೂಲ ತರುತ್ತವೆ ಎಂದು ಹೇಳಿದೆ.
ಕರ್ನಾಟಕ ಸೇರಿದಂತೆ 8 ರಾಜ್ಯಗಳಲ್ಲಿ ಭಾನುವಾರ ಬಂಕ್ ಬಂದ್ಗೆ ನಿರ್ಧರಿಸಲಾಗಿತ್ತು.
(ಸಾಂದರ್ಭಿಕ ಚಿತ್ರ)