ಏಕತೆ ತರುವ ನಿಟ್ಟಿನಲ್ಲಿ ಬಹುವೈವಿಧ್ಯತೆ ಹತ್ತಿಕ್ಕಲು ಸಾಧ್ಯವಿಲ್ಲ: ಪ್ರಣಬ್ ಮುಖರ್ಜಿ
ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಉತ್ತರಖಂಡ (ಡಿ.09): ವೈವಿಧ್ಯತೆಯ ಭಾರತದಲ್ಲಿ ಏಕರೂಪತೆ ತರುವುದು ಸಾಧ್ಯವಾಗದು. ಒಂದು ವೇಳೆ ಏಕರೂಪತೆ ತರಲು ಪ್ರಯತ್ನಿಸಿದರೆ ಅದು ಯಶಸ್ಸು ಕಾಣದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ನೋಟು ನಿಷೇಧ ವಿಚಾರವಾಗಿ ಸದನದ ಕಲಾಪ ಪ್ರತಿದಿನವೂ ಮುಂದೂಡುತ್ತಿರುವುದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಈ ಮಾತು ಹೇಳಿದ್ದಾರೆ.
ಶಾಸಕರಿಗೆ ಸಂಸತ್ ನಲ್ಲಿ ನೀಡಲಾಗಿರುವ ಸ್ವಾತಂತ್ರ್ಯವನ್ನು ಕಲಾಪ ಅಡ್ಡಿಪಡಿಸಲು ಬಳಸಬಾರದು. ಸಂಸತ್ ಕಲಾಪ ಅಡ್ಡಿಪಡಿಸುವುದು ಒಂದು ಚಟವಾಗಿಬಿಟ್ಟಿದೆ ಎಂದು ಪ್ರಣಬ್ ಮುಖರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.