ಮಂತ್ರಿ ಮಾಲ್ ಗೋಡೆ ಕುಸಿತದ ಬಗ್ಗೆ ಮೇಯರ್ ಹೇಳೋದೇನು?
ಸಂಪೂರ್ಣ ತನಿಖೆ ಆದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಬೆಂಗಳೂರು(ಜ. 16): ಮಂತ್ರಿ ಮಾಲ್'ನ ಗೋಡೆ ಕುಸಿತದ ಘಟನೆ ಶಾಕ್ ತಂದಿದೆ. ಈ ಬಗ್ಗೆ ಸುವರ್ಣನ್ಯೂಸ್'ಗೆ ಪ್ರತಿಕ್ರಿಯೆ ನೀಡಿರುವ ಮೇಯರ್ ಪದ್ಮಾವತಿ, ಮಾಲ್'ನ ವ್ಯವಹಾರಗಳನ್ನು ಸ್ಥಗಿತಗೊಳಿಸಲು ಸೂಚಿಸಿರುವುದಾಗಿ ತಿಳಿಸಿದ್ದಾರೆ. "ಕಟ್ಟಡದಲ್ಲಿ ದೋಷ ಇದ್ದಂತಿದೆ. ಮಾಲ್'ನ ಆಕ್ಯುಪೆನ್ಸಿ ಸರ್ಟಿಫಿಕೇಟ್'ನ್ನು ಹಿಂಪಡೆದುಕೊಳ್ಳುತ್ತಿದ್ದೇವೆ. ಇಲ್ಲಿಯ ಬ್ಯುಸಿನೆಸ್ ನಿಲ್ಲಿಸಲು ಸೂಚಿಸಿದ್ದೇವೆ" ಎಂದು ಮೇಯರ್ ಹೇಳಿದ್ದಾರೆ.
ಗೋಡೆ ಬಿರುಕು ಬಿಟ್ಟಿದೆ. ಕುಸಿಯುವ ಅಪಾಯವಿದ್ದಂತಿದೆ. ಕಟ್ಟಡದ ಗುಣಮಟ್ಟದಲ್ಲಿ ದೋಷ ಕಂಡುಬಂದಿದೆ ಎಂದು ಹೇಳಿರುವ ಪದ್ಮಾವತಿ, ಸಂಪೂರ್ಣ ತನಿಖೆ ಆದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.