Asianet Suvarna News Asianet Suvarna News

'ಅಸಾಮಾನ್ಯ ಕನ್ನಡಿಗ-2016' ಪ್ರಶಸ್ತಿ ಪ್ರದಾನ ಸಮಾರಂಭ: ಬನ್ನಿ ನೀವೂ ಕೈ ಜೋಡಿಸಿ

ಇದೇ 28ರ (28/10/2016) ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಪ್ಯಾಲೆಸ್ ರೋಡ್'ನಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್'ನ ಜ್ಞಾನಜ್ಯೋತಿ ಅಡಿಟೋರಿಯಂನಲ್ಲಿ 2016ನೇ ಸಾಲಿನ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಹಾಗೂ ಕೇಂದ್ರ ಸಚಿವ, ಸನ್ಮಾನ್ಯ ಶ್ರೀ ಸದಾನಂದ ಗೌಡ ಆಗಮಿಸಲಿದ್ದಾರೆ.

Asamanya Kannadiga Awards 2016

ಸಾಧಕರು ಎಂದಾಕ್ಷಣ ನಮಗೆ ಬೆರಳೆಣಿಕೆಯಷ್ಟೇ ಹೆಸರುಗಳು ಕಣ್ಮುಂದೆ ಬರುತ್ತವೆ. ಆದರೆ ಸಮಾಜದ ಒಳಿತಿಗಾಗಿ ಅದೆಷ್ಟೋ ಜನರು, ಎಲೆಮರೆ ಕಾಯಿಯಂತೆ ಸದ್ದಿಲ್ಲದೆ, ಪ್ರಚಾರವಿಲ್ಲದೆ ಅವಿರತ ಸೇವೆ ಮಾಡುತ್ತಿರುವ ಸಾಧಕರು ನಮ್ಮ ಸುತ್ತಲೇ ಇದ್ದಾರೆ. ಇಂತಹ ಸಾಧಕರನ್ನು ಗುರುತಿಸಿ, ಗೌರವಿಸಲು 'ಅಸಾಮಾನ್ಯ ಕನ್ನಡಿಗ' ಎಂಬ ವಿನೂತನ ಕಾರ್ಯಕ್ರಮ ಸುವರ್ಣ ನ್ಯೂಸ್ ಹಾಗೂ ಕನ್ನಡ ಪ್ರಭ ಮಾಧ್ಯಮ ಸಂಸ್ಥೆಗಳು ಜಂಟಿಯಾಗಿ ಕೈಗೆತ್ತಿಕೊಂಡಿವೆ.

ಈಗಾಗಲೇ ನಿಮ್ಮ ಸುತ್ತಲಿರುವ ಇಂತಹ ಸಾಧಕರನ್ನು ಗುರುತಿಸಿ ಅವರ ವಿವರಗಳನ್ನು ಕಳುಹಿಸಲು ಆಹ್ವಾನ ನೀಡಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,  ಹಲವಾರು ಸಾಧಕರ ಹೆಸರುಗಳು ನಮಗೆ ತಲುಪಿದ್ದವು. ಇವುಗಳಲ್ಲಿ ಕೆಲವನ್ನು ಆಯ್ದು ಅಂತಿಮ ಪಟ್ಟಿ ಮಾಡಲಾಗಿದೆ. ಇದೀಗ ಈ 'ಅಸಾಮಾನ್ಯ ಕನ್ನಡಿಗ'ರನ್ನು ಗೌರವಿಸುವ ಸಮಯ ಸನ್ನಿಹಿತವಾಗಿದ್ದು, ಈ ವಿನೂತನ ಕಾರ್ಯಕ್ರಮದಲ್ಲಿ ನೀವು ಕೈಜೋಡಿಸಿ.

ಇದೇ 28ರ (28/10/2016) ಶುಕ್ರವಾರ ಸಂಜೆ 4 ಗಂಟೆಗೆ ಬೆಂಗಳೂರಿನ ಪ್ಯಾಲೆಸ್ ರೋಡ್'ನಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್'ನ ಜ್ಞಾನಜ್ಯೋತಿ ಅಡಿಟೋರಿಯಂನಲ್ಲಿ 2016ನೇ ಸಾಲಿನ 'ಅಸಾಮಾನ್ಯ ಕನ್ನಡಿಗ' ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಹಾಗೂ ಕೇಂದ್ರ ಸಚಿವ, ಸನ್ಮಾನ್ಯ ಶ್ರೀ ಸದಾನಂದ ಗೌಡ ಆಗಮಿಸಲಿದ್ದಾರೆ.

ಬನ್ನಿ ಈ 'ಅಸಾಮಾನ್ಯ ಕನ್ನಡಿಗ'ರನ್ನು ಗೌರವಿಸಿ, ಅವರಿಗೊಂದು ಸಲಾಂ ಎನ್ನುವ ವಿನೂತನ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾಗಿ. ಈ ಕಾರ್ಯಕ್ರದಲ್ಲಿ ಭಾಗವಹಿಸಲು ಪಾಸ್ ವಿತರಿಸಲಾಗುತ್ತಿದೆ. ಇವುಗಳನ್ನು ಪಡೆಯಲು ಈ ನಂಬರ್'ಗೆ ಸಂಪರ್ಕಿಸಿ. ಗಿರೀಶ್ ಸಿ. ಎಂ- 9886329333

Follow Us:
Download App:
  • android
  • ios