ತಿವಾರಿ ಸಾವು: ಕರ್ನಾಟಕದಿಂದ ಉ.ಪ್ರ.ಗೆ ಹೋದ ತನಿಖಾಧಿಕಾರಿಗಳಿಗೂ ಅನುಮಾನ
ಅನುರಾಗ್ ತಿವಾರಿ ಸಾವನ್ನು ಉತ್ತರಪ್ರದೇಶ ಪೊಲೀಸರು ಕೊಲೆ ಪ್ರಕರಣವೆಂದು ಎಫ್'ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಬಹಳ ಮಹತ್ವದ ಬೆಳವಣಿಗೆಯಾಗಿದೆ. ಮೃತದೇಹ ಪತ್ತೆಯಾದ 5 ದಿನಗಳ ಬಳಿಕ ಉ.ಪ್ರ. ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ. ಅನುರಾಗ್ ತಿವಾರಿ ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಹಜರತ್'ಗಂಜ್ ಪೊಲೀಸ್ ಪೊಲೀಸರು ಅಪರಿಚಿತರಿಂದ ತಿವಾರಿ ಕೊಲೆಯಾಗಿದೆ ಎಂದು ಎಫ್'ಐಆರ್'ನಲ್ಲಿ ದಾಖಲಿಸಿದ್ದಾರೆ.
ಬೆಂಗಳೂರು(ಮೇ 22): ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವು ರಾಜ್ಯ ತನಿಖಾಧಿಕಾರಿಗಳಿಗೂ ಅನುಮಾನ ಮೂಡಿಸಿದೆ. ಉತ್ತರ ಪ್ರದೇಶದ ಲಖನೌಗೆ ರಾಜ್ಯದ 6 ಅಧಿಕಾರಿಗಳ ತಂಡ ತೆರಳಿತ್ತು. 6 ಅಧಿಕಾರಿಗಳ ಪೈಕಿ ಇಬ್ಬರು ಅಧಿಕಾರಿಗಳಿಗೆ ತಿವಾರಿ ಸಾವು ಅನುಮಾನ ಮೂಡಿಸಿದ್ದು, ಈ ಬಗ್ಗೆ ಸುವರ್ಣ ನ್ಯೂಸ್'ಗೆ ಮಾಹಿತಿ ಲಭ್ಯವಾಗಿದೆ. ರಾಜ್ಯದಿಂದ ತೆರಳಿದ್ದ ಅಧಿಕಾರಿಗಳು ತಿವಾರಿ ಕುಟಂಬದೊಂದಿಗೆ ಚರ್ಚೆ ನಡೆಸಿದ್ದು, ಕೆಲವು ಮಹತ್ವದ ವಿಚಾರಗಳನ್ನು ಕಲೆಹಾಕಿದೆ. ಆದ್ರೆ, ಈ ವಿಚಾರವಾಗಿ ಮಾಧ್ಯಮಗಳಿಗೆ ಯಾವುದೇ ಮಾಹಿತಿ ಅಥವಾ ಹೇಳಿಕೆ ನೀಡದಂತೆ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಈ ಬಗ್ಗೆ ಲಖನೌಗೆ ತೆರಳಿದ್ದ ಅಧಿಕಾರಿಗಳಿಬ್ಬರು ಸುವರ್ಣ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.
ಎಫ್'ಐಆರ್ ದಾಖಲು:
ಅನುರಾಗ್ ತಿವಾರಿ ಸಾವನ್ನು ಉತ್ತರಪ್ರದೇಶ ಪೊಲೀಸರು ಕೊಲೆ ಪ್ರಕರಣವೆಂದು ಎಫ್'ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಇದು ಬಹಳ ಮಹತ್ವದ ಬೆಳವಣಿಗೆಯಾಗಿದೆ. ಮೃತದೇಹ ಪತ್ತೆಯಾದ 5 ದಿನಗಳ ಬಳಿಕ ಉ.ಪ್ರ. ಪೊಲೀಸರು ಎಫ್'ಐಆರ್ ದಾಖಲಿಸಿದ್ದಾರೆ. ಅನುರಾಗ್ ತಿವಾರಿ ಕುಟುಂಬದವರು ನೀಡಿರುವ ದೂರಿನ ಆಧಾರದ ಮೇಲೆ ಹಜರತ್'ಗಂಜ್ ಪೊಲೀಸ್ ಪೊಲೀಸರು ಅಪರಿಚಿತರಿಂದ ತಿವಾರಿ ಕೊಲೆಯಾಗಿದೆ ಎಂದು ಎಫ್'ಐಆರ್'ನಲ್ಲಿ ದಾಖಲಿಸಿದ್ದಾರೆ.
ಸೋದರನ ನೋವು:
ಇದುವರಿಗೂ ಕರ್ನಾಟಕ ರಾಜ್ಯ ಸರ್ಕಾರದ ಯಾರೊಬ್ಬರೂ ಅನುರಾಗ್ ತಿವಾರಿ ಸಾವಿನ ಪ್ರಕರನದ ಕುರಿತು ನಮ್ಮನು ಸಂಪರ್ಕಸಿಲ್ಲ , ಹಾಗೂ ಕರ್ನಾಟಕ ರಾಜ್ಯದ ಆಹಾರ ಇಲಾಖೆಯ ಅಧಿಕಾರಿಗಳು ಕೂಡಾ ನಮ್ಮನು ಒಂದು ಮಾತು ಕೂಡಾ ಆಡಿಸಿಲ್ಲ ಎಂದು ಇದೇ ವೇಳೆ ಅನುರಾಗ್ ತಿವಾರಿ ಸೋದರ ಅಲೋಕ್ ತಿವಾರಿ ನೋವು ವ್ಯಕ್ತಪಡಿಸಿದ್ದಾರೆ.
"ಕರ್ನಾಟಕದಲ್ಲಿ ಈ ಹಿಂದೆ ಕೂಡಾ ಅನೇಕ ನಿಷ್ಠಾವಂತ ಅಧಿಕಾರಿಗಳ ಕೊಲೆಯಾಗಿದೆ. ಕರ್ನಾಟಕದಲ್ಲಿ ಯಾಕೆ ಹೀಗೆ ? ನನ್ನ ಸೋದರ ಅನುರಾಗ್ ಕೂಡಾ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವವನಾಗಿದ್ದ, ಅವನ ಸಾವಿನ ಬಗ್ಗೆ ನಮಗೆ ಕರ್ನಾಟಕ ಸರ್ಕಾರ ಯಾವುದೇ ಮಾಹಿತಿಯನ್ನ ನೀಡಿಲ್ಲ ಹಾಗೂ ಇದುವರೆಗೂ ನಮ್ಮ ಕುಟುಂಬದ ಯಾರನ್ನು ಕೂಡಾ ಸಂರ್ಪಕಿಸಿಲ್ಲ , ನಮಗೆ ಕರ್ನಾಟಕ ರಾಜ್ಯ ಸರ್ಕಾರದ ವಿಚಾರಣೆಯ ಮೇಲೆ ನಂಬಿಕೆ ಇಲ್ಲ . ಅನುರಾಗ್ ಸಾವಿನ ವಿಚಾರಾಣೆಯನ್ನ ಸಿಬಿಐ ತನಿಖೆಗೆ ನೀಡಬೇಕು. ಅನುರಾಗ್ ಸಾವಿನ ಕುರಿತು ಸತ್ಯ ವಿಷಯ ಹೊರಬರಬೇಕು.