ಅಭಿಮಾನದ ಅತಿರೇಕ : ಜಯಾ ಅಗಲಿಕೆಗೆ ನೊಂದು 77 ಸಾವು
ಸಾವಿಗೀಡಾಗಿರುವ ಮಂದಿಯ ಕುಟುಂಬಗಳಿಗೆ 3 ಲಕ್ಷ ಪರಿಹಾರ ಘೋಷಿಸಲಾಗಿದೆ.
ಸಿಎಂ ಜಯಾ ನಿಧನದ ನಂತರ ದುಃಖ ಮತ್ತು ಆಘಾತ ತಾಳಲಾಗದೆ ಸುಮಾರು 77 ಮಂದಿ ಸಾವಿಗೀಡಾಗಿದ್ದಾರೆ ಎಂದು ಎಐಎಡಿಎಂಕೆ ಬುಧವಾರ ತಿಳಿಸಿದೆ. ಸಾವಿಗೀಡಾಗಿರುವ ಮಂದಿಯ ಕುಟುಂಬಗಳಿಗೆ 3 ಲಕ್ಷ ಪರಿಹಾರ ಘೋಷಿಸಲಾಗಿದೆ. ಅಲ್ಲದೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಮತ್ತು ಬೆರಳು ಕತ್ತರಿಸಿಕೊಂಡಿದ್ದ ಪಕ್ಷದ ಕಾರ್ಯಕರ್ತರಿಗೆ 50,000 ಪರಿಹಾರ ನೀಡುವುದಾಗಿಯೂ ಪಕ್ಷ ತಿಳಿಸಿದೆ.
ಈ ನಡುವೆ, ಬುಧವಾರವೂ ಜಯಲಲಿತಾ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಸಮಾ ಬಳಿ ಜಮಾಯಿಸಿ ಕಂಬನಿ ಮಿಡಿದರು. ಜತೆಗೆ ನೂರಾರು ಬೆಂಬಲಿಗರು ‘ಅಮ್ಮ’ನ ಅಗಲಿಕೆ ನೋವಿನಲ್ಲಿ ಕೇಶಮಂಡನ ಮಾಡಿಸಿಕೊಂಡರು.