ಏಕವಚನದಲ್ಲೇ ರಾಜಹುಲಿಗೆ ಅವಾಜ್ ಹಾಕಿದ ಹುಚ್ಚ ವೆಂಕಟ್
ಮಾಧ್ಯಮದ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿರುವ ವಿಡಿಯೋ ಇಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಬೆಂಗಳೂರು(ಅ.26): ಮತ್ತೊಮ್ಮೆ ಗುಡುಗಿದ ಹುಚ್ಚ ವೆಂಕಟ್ ಮಾಧ್ಯಮದವರನ್ನು ಹಗುರವಾಗಿ ಕಾಣಬೇಡ ಕಣೋ ಯಶ್ ಎಂದು ಏಕವಚನದಲ್ಲಿ ಆವಾಜ್ ಹಾಕಿದ್ದಾರೆ. ರೈತರ ವಿಷಯವಾಗಿ ಮಾತನಾಡುವಂತೆ ಮಾಧ್ಯಮಗಳಿಗೆ ಯಶ್ ಸಲಹೆ ನೀಡಿದ ಹಿನ್ನಲೆಯಲ್ಲಿ ಹುಚ್ಚ ವೆಂಕಟ್ ಕೂಗಾಡಿದ್ದಾರೆ ಎನ್ನಲಾಗಿದೆ.
ಮಾಧ್ಯಮದವರು ಇಲ್ಲ ಅಂದ್ರೆ ಏನು ಇಲ್ಲ ಎನ್ನುವ ಹುಚ್ಚ ವೆಂಕಟ್, ನಿನ್ನ ಮೂತಿಯನ್ನು ಅಂದವಾಗಿ ತೋರಿಸುವುದು ಮಾಧ್ಯಮ ಕಣೋ ಎಂದು ಏಕವಚನದಲ್ಲೇ ಯಶ್ ಗೆ ಅವಾಜ್ ಹಾಕುವ ಹುಚ್ಚ ವೆಂಕಟ್, ಮಾಧ್ಯಮದ ತಂಟೆಗೆ ಹೋಗದಂತೆ ಎಚ್ಚರಿಕೆ ನೀಡಿರುವ ವಿಡಿಯೋ ಇಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ನೀವು ಒಮ್ಮೆ ಈ ವಿಡಿಯೋ ನೋಡಿ....!