ನಿರ್ದೇಶಕ ಎಸ್. ನಾರಾಯಣ್'ಗೆ 90 ಲಕ್ಷ ರೂ ವಂಚನೆ: ಪುನಿತ್ ಹೆಸರೇಳಿ ಮೋಸ
ಸತ್ಯನಾರಾಯಣ ಹಾಗೂ ಹರೀಶ್ ಕುಲಕುರ್ಣಿ ಎಂಬುವವರ ಪರಿಚಯ ಮಾಡಿಸಿದ್ದಾನೆ.ಸಾಲಕ್ಕೆ ಸರ್ವೀಸ್ ಚಾರ್ಜ್ ಕೊಡಬೇಕೆಂದು 90 ಲಕ್ಷ ಪಡೆದು ಮೋಸ ಮಾಡಿದ್ದರು.
ಬೆಂಗಳೂರು(ಮೇ.15): ಕನ್ನಡದ ಖ್ಯಾತ ಸಿನಿಮಾ ನಿರ್ದೇಶಕ ಎಸ್.ನಾರಾಯಣ್ ಅವರಿಗೆ ವ್ಯಕ್ತಿಯೊಬ್ಬ 90 ಲಕ್ಷ ರೂ. ವಂಚಿಸಿದ್ದಾನೆ.
ವ್ಯವಹಾರಕ್ಕಾಗಿ 200 ಕೋಟಿ ರೂ.ಸಾಲ ಕೊಡಿಸುವುದಾಗಿ ಸತ್ಯನಾರಾಯಣ್ ಎಂಬಾತ ಮೋಸ ಮಾಡಿದ್ದಾನೆ. ನಟ ಪುನೀತ್ ರಾಜ್'ಕುಮಾರ್ ಅವರ ಹೇಸರೇಳಿಕೊಂಡು ಬಂದಿದ್ದ ರಮೇಶ್ ಎಂಬಾತ ಸತ್ಯನಾರಾಯಣ ಹಾಗೂ ಹರೀಶ್ ಕುಲಕುರ್ಣಿ ಎಂಬುವವರ ಪರಿಚಯ ಮಾಡಿಸಿದ್ದಾನೆ.ಸಾಲಕ್ಕೆ ಸರ್ವೀಸ್ ಚಾರ್ಜ್ ಕೊಡಬೇಕೆಂದು 90 ಲಕ್ಷ ಪಡೆದು ಮೋಸ ಮಾಡಿದ್ದರು.
ಆರೋಪಿಗಳ ವಿರುದ್ಧ ಕಗ್ಗಲಿಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಸತ್ಯನಾರಾಯಣ್ ಅವರನ್ನು ಬಂಧಿಸಿದ್ದರು. ಪುನಃ ಸತ್ಯನಾರಾಯಣ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದು 50 ಲಕ್ಷ ರೂ. ಚೆಕ್ ನೀಡಿದ್ದು, ಅದು ಬೌನ್ಸ್ ಆಗಿದೆ. ಈ ಹಿನ್ನಲೆಯಲ್ಲಿ ನಾರಾಯಣ್ ಅವರು 22ನೇ ಎಸಿಎಂಎಂ ಕೋರ್ಟ್'ಗೆ ಖಾಸಗಿ ದೂರು ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಜೂ.5ಕ್ಕೆ ಮುಂದೂಡಿದೆ.