ನಾನು ಅನುಭವಿಸಿದ ನೋವು ನನಗೆ ಗೊತ್ತು ಎಂದ ಆವಂತಿಕ ಶೆಟ್ಟಿ : ಅಷ್ಟಕ್ಕೂ ಆದದ್ದೇನು
ಸದ್ಯ ಮುಂಬೈನಲ್ಲಿರುವ ನಟಿ ಅವಂತಿಕಾ ಶೆಟ್ಟಿ ‘ಕನ್ನಡ ಪ್ರಭ'ದೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದ್ದೇ ಬೇರೆ ವಿಚಾರ. ‘ಅಲ್ಲಿ ನಡೆದಿದ್ದೇನು ಅಂತ ಎರಡು ಮಾತುಗಳಲ್ಲಿ ಹೇಳಲಾಗದು. ಸಣ್ಣ ವಿಷಯವನ್ನು ಅವರೇ ದೊಡ್ಡದಾಗಿ ಮಾಡಿದ್ದಾರೆ. ನನ್ನಿಂದ ಅವರಿಗೆ ಕಿರಿಕ್ ಆಯಿತು ಎನ್ನುವ ಮಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರಿಂದ ನನಗೆ ತೊಂದರೆ ಆಗಿದೆ. ಅದೆಲ್ಲವನ್ನು ನಾನು ಬೆಂಗಳೂರಿಗೆ ಬಂದ ನಂತರ ಮಾತನಾಡುತ್ತೇನೆ. ನಾನು ಕೂಡ ಕನ್ನಡದ ಹುಡುಗಿ' ಎಂಬುದು ಅವರ ಖಡಕ್ ಮಾತು.
‘ರಂಗಿತರಂಗ' ಖ್ಯಾತಿಯ ಅವಂತಿಕಾ ಶೆಟ್ಟಿನಾಯಕಿಯಾಗಿದ್ದ ‘ರಾಜು ಕನ್ನಡ ಮೀಡಿಯಂ' ಚಿತ್ರದಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಚಿತ್ರೀಕರಣ ಇನ್ನೂ ಕಾಲು ಭಾಗದಷ್ಟುಬಾಕಿ ಇರುವಾಗಲೇ ಯಾಕೆ ಅವರು ಹೊರಬಿದ್ದರು ಎನ್ನುವ ಬಗ್ಗೆ ಸಾಕಷ್ಟುಅನುಮಾನಗಳು ಹುಟ್ಟಿಕೊಂಡಿವೆ. ಇದಕ್ಕೆ ಎರಡೂ ಕಡೆಯಿಂದ ಭಿನ್ನ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದು ಇನ್ನಷ್ಟುಗೊಂದಲಕ್ಕೆ ಕಾರಣವಾಗಿದೆ.
ಆಗಿದ್ದೇನು?
ಚಿತ್ರದ ನಿರ್ಮಾಪಕ ಸುರೇಶ್ ಹಾಗೂ ನಿರ್ದೇಶಕ ನರೇಶ್ ಪ್ರಕಾರ ಅವಂತಿಕಾ ಶೆಟ್ಟಿಚಿತ್ರೀಕರಣದ ವೇಳೆ ಸಾಕಷ್ಟುಆ್ಯಟಿಟ್ಯೂಡ್ ತೋರಿಸಿದ್ದೇ ಇದಕ್ಕೆ ಕಾರಣವಂತೆ. ‘ಪಾತ್ರಕ್ಕೆ 40 ದಿನಗಳ ಡೇಟ್ ಕೊಡಬೇಕು ಅಂತ ಕೇಳಿಕೊಂಡಿದ್ದೆವು. ಆಗ ಅವರಿಗೆ ಮುಂಗಡ ಹಣವಾಗಿ . 7.50 ಲಕ್ಷ ನೀಡಿದ್ದೆವು. ಚಿತ್ರೀಕರಣ ಶುರುವಾಯಿತು. 15 ದಿವಸಗಳ ಕಾಲ ಬಂದರು. ಹಾಗೆ ಬಂದಾಗಲೂ ಸಮಯಕ್ಕೆ ಸರಿಯಾಗಿ ಬರಲಿಲ್ಲ. ಅವರಿಗೆ ತಿಳಿದ ಸಮಯಕ್ಕೆ ಬರುತ್ತಿದ್ದರು. ಅದರಿಂದ ಚಿತ್ರೀಕರಣಕ್ಕೆ ತೀವ್ರ ತೊಂದರೆ ಆಗುತ್ತಿತ್ತು. ಈ ರೀತಿ ಮಾಡುವುದು ಸರಿಯಲ್ಲ ಅಂತ ಹೇಳಿದೆವು. ರಾಜೀ ಸಂಧಾನ ನಡೆಯಿತು. ಚಿತ್ರಕ್ಕೆ ತೊಂದರೆ ಆಗುತ್ತದೆ ಎನ್ನುವ ಕಾರಣಕ್ಕೆ ಸಹಿಸಿಕೊಂಡೆವು. ಅಷ್ಟಾಗಿಯೂ ಮತ್ತೆ ಕಿರಿಕಿರಿ ಆಯಿತು. ಆಕ್ಷೇಪಿಸಿದ್ದಕ್ಕೆ ಮುಂಬೈಗೆ ಹೊರಟು ಹೋದರು' ಎನ್ನುತ್ತಾರೆ ನಿರ್ಮಾಪಕ ಸುರೇಶ್.
ನಿರ್ದೇಶಕ ನರೇಶ್ ಕೂಡ ಇದನ್ನು ಸಮರ್ಥಿಸುತ್ತಾರೆ. ‘ಸೆಟ್ಗೆ ಸರಿಯಾಗಿ ಬರುತ್ತಿರಲಿಲ್ಲ. ಬಂದರೂ ಚಿತ್ರೀಕರಣದಲ್ಲಿ ಸರಿಯಾಗಿ ಆಸಕ್ತಿ ತೋರಿಸುತ್ತಿರಲಿಲ್ಲ. ನಟನೆಯ ಬಗ್ಗೆಯೇ ಅವರಲ್ಲಿ ಉತ್ಸಾಹ ಇಲ್ಲವೇನೋ ಎನ್ನುವ ಹಾಗೆ ಇರುತ್ತಿದ್ದರು. ಇದು ಸರಿ ಹೋಗಲ್ಲ ಎನ್ನುವ ಕಾರಣಕ್ಕೆ ನಾವು ಅವರನ್ನು ಅರ್ಧದಲ್ಲಿಯೇ ಕೈ ಬಿಡಲು ನಿರ್ಧಾರ ಮಾಡಿಕೊಂಡಿದ್ದು ನಿಜ' ಎನ್ನುವುದು ಅವರ ಹೇಳಿಕೆ.
ಆವಂತಿಕಾ ಹೇಳುವುದೇನು?
ಕನ್ನಡದ ಹುಡುಗಿ ಅವಂತಿಕಾ ಶೆಟ್ಟಿಈಗಷ್ಟೇ ನಟಿಯಾಗಿ ಬೆಳೆಯುತ್ತಿದ್ದಾರೆ. ಕೊಟ್ಟಕಾಲ್ಶೀಟ್ ಪೂರ್ಣಗೊಳಿಸದೇ, ಚಿತ್ರೀಕರಣಕ್ಕೆ ನಿರಾಸಕ್ತಿ ತೋರಿಸಿದ್ದು ನಿಜವೇ?
ಸದ್ಯ ಮುಂಬೈನಲ್ಲಿರುವ ನಟಿ ಅವಂತಿಕಾ ಶೆಟ್ಟಿ ‘ಕನ್ನಡ ಪ್ರಭ'ದೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದ್ದೇ ಬೇರೆ ವಿಚಾರ. ‘ಅಲ್ಲಿ ನಡೆದಿದ್ದೇನು ಅಂತ ಎರಡು ಮಾತುಗಳಲ್ಲಿ ಹೇಳಲಾಗದು. ಸಣ್ಣ ವಿಷಯವನ್ನು ಅವರೇ ದೊಡ್ಡದಾಗಿ ಮಾಡಿದ್ದಾರೆ. ನನ್ನಿಂದ ಅವರಿಗೆ ಕಿರಿಕ್ ಆಯಿತು ಎನ್ನುವ ಮಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರಿಂದ ನನಗೆ ತೊಂದರೆ ಆಗಿದೆ. ಅದೆಲ್ಲವನ್ನು ನಾನು ಬೆಂಗಳೂರಿಗೆ ಬಂದ ನಂತರ ಮಾತನಾಡುತ್ತೇನೆ. ನಾನು ಕೂಡ ಕನ್ನಡದ ಹುಡುಗಿ' ಎಂಬುದು ಅವರ ಖಡಕ್ ಮಾತು.
ಮುಂದೆ?
ಆರೋಪ, ಪ್ರತ್ಯಾರೋಪಗಳ ನಡುವೆ ಚಿತ್ರೀಕರಣ ತಡವಾಗಿದೆ. ಅವಂತಿಕಾ ಅಭಿನಯಿಸಬೇಕಿದ್ದ ಒಂದು ಹಾಡಿಗೆ ಪರ್ಯಾಯ ನಾಯಕಿಯ ಹುಡುಕಾಟ ನಡೆದಿದೆ. ಜತೆಗೆ ಚಿತ್ರದಲ್ಲಿ ಅವಂತಿಕಾ ಶೆಟ್ಟಿಅಭಿನಯಿಸಿದ್ದ ಒಂದಷ್ಟುದೃಶ್ಯಗಳನ್ನು ಚಿತ್ರ ತಂಡ ಕತ್ತರಿಸಿ ಹಾಕಿದೆ. ‘ಇದು ಸ್ವಮೇಕ್ ಸಿನಿಮಾ. ಅವರು ಬಿಟ್ಟು ಹೋದರು ಎನ್ನುವ ಕಾರಣಕ್ಕೆ ಚಿತ್ರಕ್ಕೆ ಯಾವುದೇ ರೀತಿಯಲ್ಲಿ ಲೋಪ ಆಗದಂತೆ ನೋಡಿಕೊಳ್ಳುವ ಹೊಣೆ ನಮ್ಮದು. ಆ ಕಾರಣಕ್ಕೆ ಕತೆಯಲ್ಲಿ ಒಂದಷ್ಟುಬದಲಾವಣೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ಹಾಡಿಗೆ ಯಾರನ್ನು ಕರೆ ತರಬೇಕು, ಉಳಿದ ಸನ್ನಿವೇಶಗಳನ್ನು ಹೇಗೆ ಚಿತ್ರೀಕರಿಸಬೇಕು ಎನ್ನುವುದರ ಕುರಿತು ಚರ್ಚೆ ನಡೆದಿದೆ' ಎನ್ನುತ್ತಾರೆ.
ಅಲ್ಲಿ ನಡೆದಿದ್ದೇನು ಅಂತ ಎರಡು ಮಾತುಗಳಲ್ಲಿ ಹೇಳಲಾಗದು. ಸಣ್ಣ ವಿಷಯವನ್ನು ಅವರೇ ದೊಡ್ಡದಾಗಿ ಮಾಡಿದ್ದಾರೆ. ನನ್ನಿಂದ ಅವರಿಗೆ ಕಿರಿಕ್ ಆಯಿತು ಎನ್ನುವ ಮಾತುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅವರಿಂದ ನನಗೆ ತೊಂದರೆ ಆಗಿದೆ. ಚಿತ್ರೀಕರಣ ಶುರುವಾದಾಗಿನಿಂದ ನಿರಂತರವಾಗಿ ನೋವು ಅನುಭವಿಸಿದವಳು ನಾನು. ಅದರ ವಾಸ್ತವ ನನಗಷ್ಟೇ ಗೊತ್ತಿದೆ
- ಆವಂತಿಕಾ ಶೆಟ್ಟಿನಟಿ(ಕನ್ನಡಪ್ರಭ ವಾರ್ತೆ)